ಜನವರಿ 5 ಕ್ಕೆ ತೆರೆಕಾಣುತ್ತಿದೆ ʼನಾರಾಯಣ ನಾರಾಯಣʼ ಸಿನಿಮಾ

ಶ್ರೀಕಾಂತ್ ಕೆಂಚಪ್ಪ ನಿರ್ದೇಶನದ ‘ನಾರಾಯಣ ನಾರಾಯಣ’ ಎಂಬ ಸಿನಿಮಾ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮುಂದಿನ ತಿಂಗಳು ಜನವರಿ ಐದರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಕುರಿತು ನಿರ್ದೇಶಕರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ

ಈ ಚಿತ್ರದಲ್ಲಿ ಕೃಷ್ಣ ಸೇರಿದಂತೆ ದರ್ಶನ್, ಬಿಂಬಿಕ, ರಾಘು ಭಟ್, ಪುನೀತ್, ಶಶಿಕಾಂತ್, ಗುರುಕಿರಣ್, ನಿಧಿ ದೀಕ್ಷಿತ್, ಶಶಿಕುಮಾರ್, ಅನಂತ್ ಕುಮಾರ್ ಕನಕಪುರ, ಪ್ರಸಾದ್ ಭಟ್ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ.

ಸತ್ಯ ರಾಧಾಕೃಷ್ಣ ಹಾಗೂ ಜತಿನ್ ದರ್ಶನ್ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದು, ಕೃಷ್ಣಪ್ಪ ಹಾಗೂ ಮಂಜುನಾಥ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅರವಿಂದ ರಾಜು ಸಂಕಲನವಿದ್ದು, ಕಮಲ್ ಸಿಂಗ್ ಮತ್ತು ಲಕ್ಕೇಗೌಡ ಛಾಯಾಗ್ರಾಣವಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read