alex Certify Shocking: ಕಾಲಿಗೆ ‘ಮಸಾಜ್’ ಮಾಡಲು ನಿರಾಕರಿಸಿದ ತಂದೆಯನ್ನು ಹೊಡೆದು ಕೊಂದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಕಾಲಿಗೆ ‘ಮಸಾಜ್’ ಮಾಡಲು ನಿರಾಕರಿಸಿದ ತಂದೆಯನ್ನು ಹೊಡೆದು ಕೊಂದ ಪಾಪಿ

ಪಾಪಿ ಪುತ್ರನೊಬ್ಬ ತನ್ನ ತಂದೆಗೆ ಕಾಲಿಗೆ ಮಸಾಜ್ ಮಾಡಲು ಹೇಳಿದ್ದು, ಆತನ ವಯೋವೃದ್ಧ ತಂದೆ ಇದಕ್ಕೆ ನಿರಾಕರಿಸಿದ ವೇಳೆ ಅವರ ಮೇಲೆ ತೀವ್ರತರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಇಂತಹದೊಂದು ನೀಚ ಕೃತ್ಯ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ನಾಗಪುರದ ನವಾಬ್ಪುರ ಏರಿಯಾದಲ್ಲಿ ಶನಿವಾರದಂದು ಈ ಘಟನೆ ನಡೆದಿತ್ತು, ಕುಶಾಲ್ ಅಲಿಯಾಸ್ ಲಿಂಗ ಶೆಂಡೆ ತನ್ನ ತಂದೆ ದತ್ತಾತ್ರೇಯ ಅವರನ್ನು ಹೊಡೆದು ಹತ್ಯೆ ಮಾಡಿದ್ದಾನೆ.

ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಕುಶಾಲ್ ಶನಿವಾರ ಸಂಜೆ ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದು, ತನ್ನ ತಂದೆಗೆ ಕಾಲಿಗೆ ಮಸಾಜ್ ಮಾಡಲು ಹೇಳಿದ್ದಾನೆ. ಇದಕ್ಕೆ ದತ್ತಾತ್ರೇಯ ನಿರಾಕರಿಸಿದಾಗ ಅವರ ಎದೆ, ತಲೆ, ಕಾಲಿಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಬಿಡಿಸಲು ಬಂದ ಸಹೋದರ ಪ್ರಣವ್ ಪ್ರಾಣ ಬೆದರಿಕೆ ಹಾಕಿದ್ದಾನೆ.

ಬಳಿಕ ಪ್ರಣವ್ ಅಕ್ಕಪಕ್ಕದವರ ಸಹಾಯ ಯಾಚಿಸಿದ್ದು, ಅವರೊಂದಿಗೆ ಮನೆಗೆ ಬಂದು ನೋಡಿದಾಗ ತನ್ನ ತಂದೆ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡಿದ್ದಾನೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು ಎನ್ನಲಾಗಿದೆ. ಪೊಲೀಸರು ಇದೀಗ ಕುಶಾಲ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...