
ನವಿ ಮುಂಬೈನ ಕೊಪರ್ ಖೈರಾನೆಯ ಬಾಲಾಜಿ ಮೂವಿಪ್ಲೆಕ್ಸ್ ಥಿಯೇಟರ್ನಲ್ಲಿ ‘ಛಾವಾ’ ಚಿತ್ರದ ಪ್ರದರ್ಶನದ ವೇಳೆ ಐವರು ವ್ಯಕ್ತಿಗಳು ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ನಗುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜರ ಚಿತ್ರಹಿಂಸೆಯ ದೃಶ್ಯಕ್ಕೆ ಈ ಐವರು ನಕ್ಕಿದ್ದು, ಇದರಿಂದ ಆಕ್ರೋಶಗೊಂಡ ಇತರ ಪ್ರೇಕ್ಷಕರು ಅವರನ್ನು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಐವರು ವ್ಯಕ್ತಿಗಳನ್ನು ಮಂಡಿಯೂರಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಗಿದೆ. ಮೊದಲು ಒಬ್ಬ ವ್ಯಕ್ತಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಕ್ಷಮೆ ಕೇಳಲು ಪ್ರಯತ್ನಿಸಿದಾಗ, ಇತರ ಪ್ರೇಕ್ಷಕರು ಆತನನ್ನು ತಿದ್ದಿ ಛತ್ರಪತಿ ಸಂಭಾಜಿ ಮಹಾರಾಜರಿಗೆ ಕ್ಷಮೆ ಕೇಳುವಂತೆ ಹೇಳಿದ್ದಾರೆ. ನಂತರ ಆತ ಹಿಂದಿಯಲ್ಲಿ “ಛತ್ರಪತಿ ಸಂಭಾಜಿ ಮಹಾರಾಜರ ಚಿತ್ರ ಪ್ರದರ್ಶನವಾಗುತ್ತಿದ್ದಾಗ ನಾವು ನಗುತ್ತಿದ್ದೆವು” ಎಂದು ಹೇಳಿ ಕ್ಷಮೆ ಯಾಚಿಸಿದ್ದಾನೆ. “ಇದು ನಮ್ಮ ಕರ್ಮಭೂಮಿ, ಹೇಗೆ ಮರೆಯಲು ಸಾಧ್ಯ” ಎಂದು ಸಹ ಹೇಳಿದ್ದಾನೆ. ನಂತರ ಅವರನ್ನು ಥಿಯೇಟರ್ನಿಂದ ಹೊರಗೆ ಕಳುಹಿಸಲಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಪ್ರೇಕ್ಷಕರ ಕ್ರಮವನ್ನು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಇದು ಅತಿಯಾದ ಪ್ರತಿಕ್ರಿಯೆ ಎಂದು ಅಭಿಪ್ರಾಯಪಟ್ಟಿದ್ದಾರೆ.
बालाजी थिएटर, कोपरखैरणे येथे “छावा” चित्रपटातील शेवटच्या दृश्यांवर हे निजामी मराठ्यांचे हे मुस्लिम मावळे हसत होते.
काही छत्रपतींच्या मावळ्यांनी त्यांना अद्दल घडवून पोलीसांच्या ताब्यात दिले.
मुस्लिमांचे लांगूलचालन करणाऱ्या निजामी मराठ्यांना हा व्हिडीओ दाखवा. pic.twitter.com/DJoOMcOwDc
— टवाळखोर कार्ट (@Tawalkhorkart) February 28, 2025