
2020 ರ ಜುಲೈ ತಿಂಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯನ್ನು ಪ್ರತಿಯೊಂದು ಮನೆಯಲ್ಲೂ ಮಿಸ್ ಮಾಡದೆ ವೀಕ್ಷಿಸುತ್ತಿದ್ದರು. ಪ್ರತಿ ದಿನ ಬರುತ್ತಿದ್ದ ಈ ಧಾರಾವಾಹಿ ಇತ್ತೀಚಿಗೆ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 9:30ಕ್ಕೆ ಪ್ರಸಾರವಾಗುತ್ತಿತ್ತು ಇಂದಿಗೂ ಒಳ್ಳೆಯ ರೇಟಿಂಗ್ ನಲ್ಲಿದೆ.
ವಿನೋದ್ ಮಾಣಿಕ್ರಾವ್ ಈ ಧಾರಾವಾಹಿಯನ್ನು ನಿರ್ದೇಶಿಸಿದ್ದು, ಶಾಂತಿಭೂಷಣ ಕಥೆ ಬರೆದಿದ್ದಾರೆ. ಅಥರ್ವ ಕರವೇ ಸೇರಿದಂತೆ ಆಯುಧ್ ಭಾನುಶಾಲಿ, ಪ್ರಸಾದ್ ಜಾವಡೆ, ನೇಹಾ ಜೋಶಿ, ಸೌದ್ ಮನ್ಸೂರಿ, ಅಮಿತ್ ಪಾಂಡೆ, ನಾರಾಯಣಿ ಮಹೇಶ್ ವರ್ಣೆ, ಜಗನ್ನಾಥ ನಿವಾಂಗುನೆ, ವಂಶಿಕಾ ಯಾದವ್, ಅತುಲ್ ಪಾಟೀಲ್, ಅಭಿನಯಿಸಿದ್ದಾರೆ.