alex Certify ಭಾರತ – ಶ್ರೀಲಂಕಾ ಅಂತಿಮ ಏಕದಿನ ಹಣಾಹಣಿ; ಇಂದು ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ – ಶ್ರೀಲಂಕಾ ಅಂತಿಮ ಏಕದಿನ ಹಣಾಹಣಿ; ಇಂದು ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

ಕೊಲಂಬೋದಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡ 1-0 ಇಂದ ಮುನ್ನಡೆ ಸಾಧಿಸಿದೆ. ಮೊದಲನೇ ಪಂದ್ಯ ಡ್ರಾ ಆದರೆ ಮತ್ತೊಂದು ಪಂದ್ಯದಲ್ಲಿ 32 ಗಳಿಂದ ರನ್ ಗಳಿಂದ  ಶ್ರೀಲಂಕಾ ತಂಡ ರೋಚಕ ಜಯ ಸಾಧಿಸಿದೆ.

ಈ ಮೂಲಕ ಟಿ 20 ವಿಶ್ವಕಪ್ ಚಾಂಪಿಯನ್ನರಿಗೆ ಸೋಲಿನ ರುಚಿ ತೋರಿಸಿದೆ. ಶ್ರೀಲಂಕಾದ ಯುವ ಸ್ಪಿನ್ನರ್ ಗಳ ದಾಳಿಗೆ ಭಾರತ ತಂಡ ತತ್ತರಿಸಿ ಹೋಗಿದೆ. ನಾಯಕ ರೋಹಿತ್ ಶರ್ಮ  ಹೊರತುಪಡಿಸಿ ಯಾವ ಬ್ಯಾಟ್ಸ್ಮನ್ ಗಳಿಂದಲೂ ಉತ್ತಮ ಪ್ರದರ್ಶನ ದೊರೆಯದೆ ಇರುವುದರಿಂದ ಭಾರತಕ್ಕೆ ಈ  ಪಿಚ್ ನಲ್ಲಿ ಗೆಲುವು ಸಾಧಿಸಲು ಕಷ್ಟಕರವಾಗುತ್ತಿದೆ.

ಇಂದು ಏಕದಿನ ಸರಣಿಯ ಅಂತಿಮ ಪಂದ್ಯ ಕೊಲಂಬೋದಲ್ಲಿ ನಡೆಯುತ್ತಿದ್ದು, ಭಾರತಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯವನ್ನು ಗೆದ್ದು ಭಾರತ ತಂಡ ಸರಣಿಯನ್ನು ಸಮಬಲಗೊಳಿಸಲಿದೆಯಾ ಕಾದು ನೋಡಬೇಕಾಗಿದೆ. ಮತ್ತೊಂದೆಡೆ t20 ಸರಣಿಯಲ್ಲಿ ತನ್ನ ಕಳಪೆ ಪ್ರದರ್ಶನದಿಂದ ಟೀಕೆಗೀಡಾಗಿದ್ದ ಶ್ರೀಲಂಕಾ ತಂಡ ಏಕದಿನ ಸರಣಿಯ ಮೂಲಕ ಕಂಬ್ಯಾಕ್ ಮಾಡಿದ್ದು, ಸರಣಿಯನ್ನು ತನ್ನದಾಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...