ಟ್ರಾಕ್ಟರ್ ತೊಳೆಯುತ್ತಿದ್ದಾಗಲೇ ದುರಂತ; ವಿದ್ಯುತ್ ತಗುಲಿ ಬಾಲಕ ಸಾವು

ಭಾನುವಾರದಂದು ಮನೆ ಬಳಿ ಟ್ರಾಕ್ಟರ್ ತೊಳೆಯುತ್ತಿದ್ದ 15 ವರ್ಷದ ಬಾಲಕನೊಬ್ಬ ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ಸಮೀಪದ ಸುರಹೊನ್ನೆ ಗ್ರಾಮದಲ್ಲಿ ನಡೆದಿದೆ.

ದರ್ಶನ್ ಮೃತಪಟ್ಟ ಬಾಲಕನಾಗಿದ್ದು, ಈತ ನ್ಯಾಮತಿಯ ಕೆಪಿಎಸ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣನಾಗಿದ್ದ. ಇಂದಿನಿಂದ ಹತ್ತನೇ ತರಗತಿಗೆ ಹಾಜರಾಗಬೇಕಿದ್ದ ಬಾಲಕ ಈಗ ಬಾರದ ಲೋಕಕ್ಕೆ ತೆರಳಿದ್ದಾನೆ.

ಬಾಲಕನ ತಂದೆ 2020 ರ ಕೊರೊನಾ ವೇಳೆ ಮೃತಪಟ್ಟಿದ್ದು, ಇದೀಗ ಮಗನನ್ನೂ ಕಳೆದುಕೊಂಡ ಆತನ ತಾಯಿ ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಬಾಲಕನ ಸಾವಿಗೆ ಮೋಟಾರ್ ನಿಂದ ವಿದ್ಯುತ್ ಪ್ರವಹಿಸಿದ್ದೇ ಕಾರಣ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read