ನರಭಕ್ಷಕ ಚಿರತೆ ದಾಳಿಗೆ ಮೂರನೇ ಬಲಿ: ಮನೆಯಿಂದ ಹೊರಬಂದ ವೃದ್ಧೆಯ ಎಳೆದೊಯ್ದ ಚಿರತೆ

ಮೈಸೂರು: ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನಲ್ಲಿ ನರಭಕ್ಷಕ ಚಿರತೆ ದಾಳಿಗೆ ಮೂರನೇ ಬಲಿಯಾಗಿದೆ. ಇದುವರೆಗೆ ಮೂವರನ್ನು ಚಿರತೆ ಬಲಿ ಪಡೆದಿದೆ. ವಿದ್ಯಾರ್ಥಿ, ಯುವತಿ ನಂತರ ವೃದ್ಧೆಯೂ ಚಿರತೆ ದಾಳಿಯಿಂದ ಮೃತಪಟ್ಟಿದ್ದಾರೆ.

ಕಂದನಾಯಕನಹಳ್ಳಿಯಲ್ಲಿ 60 ವರ್ಷದ ಸಿದ್ದಮ್ಮ ಚಿರತೆ ದಾಳಿಯಿಂದ ಸಾವು ಕಂಡಿದ್ದಾರೆ. ಮನೆಯ ಹೊರಗಡೆ ಇದ್ದ ಸೌದೆಯನ್ನು ಎತ್ತಿಕೊಳ್ಳಲು ಬಂದಿದ್ದಾಗ ಏಕಾಏಕಿ ಚಿರತೆ ದಾಳಿ ಮಾಡಿದೆ.

ಸಿದ್ದಮ್ಮ ಅವರ ಮೇಲೆ ದಾಳಿ ಮಾಡಿದ ಚಿರತೆ ಅವರನ್ನು ದೂರದವರೆಗೆ ಎಳೆದುಕೊಂಡು ಹೊರಟಿದೆ. ಸಿದ್ಧಮ್ಮ ಕೂಗಾಟ ಕೇಳಿದ ಗ್ರಾಮಸ್ಥರು ರಕ್ಷಣೆಗೆ ಮುಂದಾಗಿ ಕಿರುಚಾಡಿದ್ದಾರೆ. ಆಗ ಚಿರತೆ ಸಿದ್ಧಮ್ಮ ಅವರನ್ನು ಬಿಟ್ಟು ಹೋಗಿದೆ. ಅಷ್ಟರಲ್ಲಾಗಲೇ ಚಿರತೆ ದಾಳಿಯಿಂದಾಗಿ ಸಿದ್ದಮ್ಮ ಸಾವು ಕಂಡಿದ್ದಾರೆ. ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read