ಗಣಪತಿ 25 ಕೆಜಿ ಲಡ್ಡು ಪ್ರಸಾದ 4.50 ಲಕ್ಷ ರೂ.ಗೆ ಮಾರಾಟ

ಬೆಂಗಳೂರು: ಬಾಗಲಗುಂಟೆಯ ಎಂಇಐ ಆಟದ ಮೈದಾನದಲ್ಲಿ ಆಯೋಜಿಸಿದ್ದ ದಾಸರಹಳ್ಳಿ ಗಣೇಶೋತ್ಸವದಲ್ಲಿ ಗಣಪತಿ ಪ್ರಸಾದ 25 ಕೆಜಿ ಲಡ್ಡು 4.50 ಲಕ್ಷ ರೂ.ಗೆ ಮಾರಾಟವಾಗಿದೆ.

ಹರಾಜಿನಲ್ಲಿ ಬಿಜೆಪಿ ಮುಖಂಡ ಚಿಕ್ಕಸಂದ್ರ ಮೋಹನ್ ಕುಮಾರ್ 4.50 ಲಕ್ಷ ರೂ. ನೀಡಿ ಲಡ್ಡು ಪ್ರಸಾದ ಖರೀದಿಸಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಎಸ್. ಮುನಿರಾಜು ಅವರು ಲಡ್ಡು ಹಸ್ತಾಂತರಿಸಿದ್ದಾರೆ.

ಕಳೆದ ವರ್ಷ ಗಣೇಶನ ಲಡ್ಡು ಪ್ರಸಾದವನ್ನು ರಿಯಲ್ ಎಸ್ಟೇಟ್ ಉದ್ಯಮಿ ಲಕ್ಷ್ಮಣ್ ಗೌಡ 4.25 ಲಕ್ಷ ರೂ.ಗೆ ಹರಾಜಿನಲ್ಲಿ ಪಡೆದಿದ್ದರು. ಈಗ ಮೋಹನ್ ಕುಮಾರ್ ಖರೀದಿಸಿದ್ದಾರೆ. ಸಂಗ್ರಹವಾದ ಹಣವನ್ನು ಮುಂದಿನ ಗಣೇಶೋತ್ಸವಕ್ಕೆ ಬಳಸಿಕೊಳ್ಳಲಾಗುವುದು ಎಂದು ಎಸ್. ಮುನಿರಾಜು ತಿಳಿಸಿದ್ದಾರೆ.

ಗಣೇಶೋತ್ಸವ ಅಂಗವಾಗಿ ಮಹಿಳೆಯರಿಗೆ ಗಾಯನ, ನೃತ್ಯ, ರಂಗೋಲಿ ಸ್ಪರ್ಧೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read