ರಸ್ತೆಯಲ್ಲೇ ಚಾಕುವಿನಿಂದ ಇರಿದು ಯುವತಿ ಹತ್ಯೆ: ಕುತ್ತಿಗೆಯಲ್ಲೇ ಸಿಲುಕಿದ ಚಾಕು

ವಿಜಯಪುರ: ನಡು ರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಯುವತಿಯನ್ನು ಬರ್ಬರ ಹತ್ಯೆ ಮಾಡಲಾಗಿದೆ. ವಿಜಯಪುರ ಜಿಲ್ಲೆ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

28 ವರ್ಷದ ಗಂಗೂಬಾಯಿ ಯಂಕಂಚಿ ಕೊಲೆಯಾದ ಯುವತಿ ಎಂದು ಹೇಳಲಾಗಿದೆ. ಅವರು ಸ್ಕೂಟಿಯ ಮೇಲೆ ತೆರಳುತ್ತಿದ್ದಾಗ ದುಷ್ಕರ್ಮಿ ದಾಳಿ ಮಾಡಿದ್ದು, ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಗಂಗೂಬಾಯಿ ಕುತ್ತಿಗೆಯಲ್ಲೇ ಚಾಕು ಸಿಲುಕಿದೆ. ಕೃತ್ಯವೆಸಗಿದ ಬಳಿಕ ಗಂಗೂಬಾಯಿ ಸ್ಕೂಟಿಯಲ್ಲಿಯೇ ಹಂತಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read