BIG NEWS: ಅರಬ್ಬಿ ಸಮುದ್ರದಲ್ಲಿ ನೌಕಾದಳದಿಂದ ಎರಡು ಬೋಟ್ ಗಳು ವಶಕ್ಕೆ: 6 ಮೀನುಗಾರರು ಅರೆಸ್ಟ್

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್ ಗಳನ್ನು ನೌಕಾದಳ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಮೀನುಗಾರರನ್ನು ಬಂಧಿಸಿದ್ದಾರೆ.

ಕಾರವಾರದ ಅರಗಾ ಬಳಿ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿದ ಎರಡು ಬೋಟ್ ಗಳು ನೌಕಾದಳಿ ವ್ಯಾಪ್ತಿಯ ಪ್ರದೇಶಕ್ಕೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ನೌಕಾದಳದ ಸಿಬ್ಬಂದಿ ಎರಡು ಬೋಟ್ ಗಳನ್ನು ವಶಕ್ಕೆ ಪಡೆದು 6 ಮೀನುಗಾರರನ್ನು ಬಂಧಿಸಿದ್ದಾರೆ.

ಕಾರವಾರದ ಬೈತಕೋಲಿನ ರವಿ ನಾರಾಯಣ್ ಹರಿಕಾಂತ್ ಎಂಬುವವರಿಗೆ ಸೇರಿದ ಆರ್ಯಪರಮ್ ಎಂಬ ಬೋಟ್ ಹಾಗೂ ರಾಜು ವಾಮಂತ್ ತಾಂಡೇಲ್ ಎಂಬುವವರಿಗೆ ಸೇರಿದ ಓಂ ಶ್ರೀ ಆರ್ಯದುರ್ಗ ಎಂಬ ಹೆಸರಿನ ಬೋಟ್ ಇದಾಗಿದೆ. ಆರು ಜನರನ್ನು ಬಂಧಿಸಲಾಗಿದು, ಕಾರವಾರ ಗ್ರಾಮೀಣ ಠಾಣೆ ಪೊಲೀಸರ ವಶಕ್ಕೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read