ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರುಪಾಲು

ರಾಮನಗರ: ಸ್ನೇಹಿತರೊಂದಿಗೆ ರಾಮನಗರ ಜಿಲ್ಲೆ ಕನಕಪುರದ ಚುಂಚಿ ಫಾಲ್ಸ್ ಗೆ ವಿಹಾರಕ್ಕೆ ಹೋಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದಾರೆ. ವಿದ್ಯಾರ್ಥಿ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ನಾರಾಯಣಪುರದ ವರುಣ್(19) ನಾಪತ್ತೆಯಾದ ವಿದ್ಯಾರ್ಥಿ. ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ಓದುತ್ತಿರುವ ವರುಣ್ ಹಾಗೂ ನಾಲ್ವರು ಸ್ನೇಹಿತರು ಶುಕ್ರವಾರ ಚುಂಚಿ ಫಾಲ್ಸ್ ಗೆ ಬಂದಿದ್ದಾರೆ. ನೀರಿನ ಮಡುವಿನಲ್ಲಿ ಈಜುವಾಗ ವರುಣ್ ನೀರುಪಾಲಾಗಿದ್ದಾನೆ.

ಸ್ನೇಹಿತರು ಸಾತನೂರು ಠಾಣೆ ಪೋಲೀಸರಿಗೆ ವಿಷಯ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆಯಿಂದ ಹುಡುಕಾಟ ನಡೆಸಿದರೂ ವರುಣ್ ಪತ್ತೆಯಾಗಿಲ್ಲ. ಭಾನುವಾರವೂ ಶೋಧ ಕಾರ್ಯಾಚರಣೆ ಮುಂದುವರೆಸಲಾಗುವುದು. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read