ಜೈಲಿನೊಳಗೆ ನಿಷೇಧಿತ ವಸ್ತು ಎಸೆದಿದ್ದ ನಾಲ್ವರು ಅರೆಸ್ಟ್

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದೊಳಗೆ ನಿಷೇಧಿತ ವಸ್ತುಗಳನ್ನು ಎಸೆದಿದ್ದ ನಾಲ್ವರನ್ನು ಬಂಧಿಸಲಾಗಿದೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿರುವ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇಂದಿರಾ ನಗರ ನಿವಾಸಿ ಲೋಕೇಶ್(24), ಹೋಟೆಲ್ ಕಾರ್ಮಿಕ ಉದಯಕುಮಾರ್(29) ಜೆಸಿಬಿ ಆಪರೇಟರ್ ಮುಬಾರಕ್ ಅಬ್ಬಾಸ್ ಅಲಿ ಹಾಗೂ ಮೆಕಾನಿಕ್ ಸಾಜೀದ್ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚೆಂಡಿನ ರೂಪದಲ್ಲಿ ಸುತ್ತಿ ಮೊಬೈಲ್, ಗಾಂಜಾ, ತಂಬಾಕು ಉತ್ಪನ್ನ, ಡ್ರಗ್ಸ್ ಇದ್ದರೆ ವಸ್ತುಗಳನ್ನು ಜೈಲಿನೊಳಗೆ ಎಸೆದಿದ್ದರು. ಕೊಲೆ ಪ್ರಕರಣದಲ್ಲಿ ಜೈಲಿನೊಳಗಿರುವ ಅಪರಾಧಿಗಳಿಗೆ ಇವುಗಳನ್ನು ತಲುಪಿಸಲು ಯತ್ನಿಸುತ್ತಿರುವುದಾಗಿ ಆರೋಪಿಗಳು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ. ಎರಡು ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read