BIG NEWS : ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಖಜಾನೆಗಳಿಗೆ ಬಿಲ್ಲುಗಳನ್ನು ಸಲ್ಲಿಸುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. , ಆರ್ಥಿಕ ಇಲಾಖೆಯ ಎಲ್ಲಾ ಶಾಖೆಗಳು ದಿನಾಂಕ:15.03.2025 ರೊಳಗಾಗಿ ಹೊರಡಿಸುವ ಹೆಚ್ಚುವರಿ / ಪುನರ್ವಿನಿಯೋಗ ಆದೇಶಗಳನ್ನು ಒಳಗೊಂಡಂತೆ ಯಾವುದೇ ಹಣ ಬಿಡುಗಡೆಗೆ ಅನುಮತಿಸುವ ಸಂಧರ್ಭಗಳಲ್ಲಿ ತತ್ಸಂಬಂಧ ಬಿಲ್ಲುಗಳನ್ನು, ಆರ್ಥಿಕ ಇಲಾಖೆಯಿಂದ ಹೊರಡಿಸಲಾಗುವ ಹಿಂಬರಹದ ದಿನಾಂಕದಿಂದ 10 ದಿನಗಳೊಳಗಾಗಿ ಖಜಾನೆಗೆ ಸಲ್ಲಿಸುವಂತೆ ಹಿಂಬರಹದಲ್ಲಿ ನಮೂದಿಸುವುದು.

ಅದೇ ರೀತಿ, ದಿನಾಂಕ:15.03.2025 ರ ನಂತರ ಹೊರಡಿಸಲಾಗುವ ಇಂತಹ ಹಿಂಬರಹಗಳಲ್ಲಿ, ಹಿಂಬರಹದ ದಿನಾಂಕದಿಂದ 07 ದಿನಗಳೊಳಗಾಗಿ ಖಜಾನೆಗೆ ಬಿಲ್ಲುಗಳನ್ನು ಸಲ್ಲಿಸಲು ಸೂಚಿಸುವಂತೆ ತಿಳಿಸಿದೆ. (ಉದಾ: ಹಿಂಬರಹ ದಿನಾಂಕ:16.03.2025 ಬಿಲ್ಲು ಸಲ್ಲಿಕೆ ದಿ.23.03.2025 ರೊಳಗೆ) ಇದರಿಂದ ಖಜಾನೆಯಲ್ಲಿ ಬಿಲ್ಲನ್ನು ಸ್ವೀಕರಿಸಲು ಯಾವುದೇ ಗೊಂದಲವಾಗುವುದಿಲ್ಲವಾದ್ದರಿಂದ ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೋರಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read