ಮುಂಜಾನೆ ಈ ಪರಿಹಾರ ಮಾಡಿದರೆ ‘ಲಕ್ಷ್ಮಿ’ ಅನುಗ್ರಹ ಖಚಿತ, ಆರ್ಥಿಕ ಸಮಸ್ಯೆಗಳಿಂದಲೂ ಸಿಗುತ್ತೆ ಮುಕ್ತಿ….!

ಹಿಂದೂ ಧರ್ಮದಲ್ಲಿ ತಾಯಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ಸಿಕ್ಕರೆ ಆರ್ಥಿಕ ಸಮಸ್ಯೆಗಳಿರುವುದಿಲ್ಲ. ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಜ್ಯೋತಿಷ್ಯದಲ್ಲಿ ಕೆಲವು ಖಚಿತವಾದ ಪರಿಹಾರಗಳನ್ನು ಸೂಚಿಸಲಾಗಿದೆ. ಸೋಮಾರಿತನವನ್ನು ತೊರೆದು ಮುಂಜಾನೆ ಈ ಕ್ರಮಗಳನ್ನು ಅಳವಡಿಸಿಕೊಂಡರೆ ಲಕ್ಷ್ಮಿ ದೇವಿಯ ಆಶೀರ್ವಾದವು ಸದಾ ಇರುತ್ತದೆ.

ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುಗಳ ದಾನ

ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಬೇಕು. ನಂತರ ಕೆಲವು ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠ. ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾದ ಶಂಖ, ಕೌರಿ ಮತ್ತು ಕಮಲದ ಹೂವನ್ನು ದಾನ ಮಾಡಬೇಕು.

ಸ್ವಚ್ಛತೆ

ಪ್ರತಿದಿನ ಬೆಳಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ. ಏಕೆಂದರೆ ಲಕ್ಷ್ಮಿ ದೇವಿ ಸ್ವಚ್ಛವಾದ ಮನೆಯಲ್ಲಿ ಮಾತ್ರ ನೆಲೆಸುತ್ತಾಳೆ. ಲಕ್ಷ್ಮಿ ದೇವಿಯ ಆಗಮನಕ್ಕೆ ಬೆಳಗಿನ ಸಮಯವನ್ನು ವಿಶೇಷವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಮನೆ ಶುದ್ಧವಾಗಿರಬೇಕು.

ಉಪ್ಪು ನೀರು ಬಳಕೆ

ಬೆಳಗ್ಗೆ ಮನೆಯನ್ನು ಸ್ವಚ್ಛಗೊಳಿಸುವಾಗ ಉಪ್ಪು ನೀರಿನಿಂದ ಮನೆಯನ್ನು ಒರೆಸಿ. ಇದರೊಂದಿಗೆ ಲಕ್ಷ್ಮಿ ದೇವಿಯು ಮನೆಗೆ ಆಗಮಿಸುತ್ತಾಳೆ. ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿಯೂ ಸಿಗುತ್ತದೆ. ನಿಯಮಿತವಾಗಿ ಈ ಪರಿಹಾರವನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಿ.

ಶುಕ್ರವಾರದಂದು ಮಾಡಿ ಈ ಕೆಲಸ

ಧಾರ್ಮಿಕ ನಂಬಿಕೆಗಳ ಪ್ರಕಾರ ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಆದ್ದರಿಂದ ಶುಕ್ರವಾರದಂದು ಈ ಎಲ್ಲಾ ಕಾರ್ಯಗಳನ್ನು ಮಾಡಿದರೆ ಲಕ್ಷ್ಮಿಯ ಕೃಪಾಕಟಾಕ್ಷ ಸಿಗುತ್ತದೆ. ದೇವಿ ಪ್ರಸನ್ನಳಾಗುತ್ತಾಳೆ.

ಶಾಸ್ತ್ರಗಳ ಪ್ರಕಾರ ಮನೆಯ ದೇವಾಲಯವು ಯಾವಾಗಲೂ ಈಶಾನ್ಯ ಮೂಲೆಯಲ್ಲಿರಬೇಕು. ದೇವರ ಮನೆ ಈಶಾನ್ಯ ಮೂಲೆಯಲ್ಲಿದ್ದರೆ ಲಕ್ಷ್ಮಿ ನೆಲೆಸುತ್ತಾಳೆ. ಜೊತೆಗೆ ವಾಸ್ತು ದೋಷಗಳಿಂದಲೂ ಪರಿಹಾರ ಸಿಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read