ಬೆಂಗಳೂರು : ಬಾಬಾ ಸಾಹೇಬರು ರಚಿಸಿದ ಸಂವಿಧಾನ ಇಲ್ಲದಿದ್ದರೆ ನಾನು ನನ್ನೂರಿನಲ್ಲಿ ಕುರಿಯನ್ನೋ, ದನವನ್ನೋ ಕಾಯುತ್ತಾ ಇರುತ್ತಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಾನು ಎರಡೆರಡು ಬಾರಿ ಮುಖ್ಯಮಂತ್ರಿಯಾಗಿರುವುದು ಸಂವಿಧಾನದಿಂದ. ನನ್ನ ಬದುಕಿನ ಅನುಕ್ಷಣವೂ ಬಾಬಾ ಸಾಹೇಬರಿಗೆ ನಾನು ಋಣಿ “.ನಮ್ಮ ಅಂಬೇಡ್ಕರ್ ನಮಗೆ ಆದರ್ಶ. ಸಂವಿಧಾನ ಇಲ್ಲದಿದ್ದರೆ ನಾನು ನನ್ನೂರಿನಲ್ಲಿ ಕುರಿಯನ್ನೋ, ದನವನ್ನೋ ಕಾಯುತ್ತಾ ಇರುತ್ತಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶತಮಾನಗಳಿಂದ ಅವಕಾಶ ವಂಚಿತ ಸಮುದಾಯಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಮೂಲಕ ಘನತೆಯಿಂದ ಬದುಕುವ ಹಕ್ಕನ್ನು ನೀಡಿದರು. ಅಂಬೇಡ್ಕರ್ ಅವರ ಹುಟ್ಟು ನಮ್ಮೆಲ್ಲರ ಹುಟ್ಟನ್ನು ಅರ್ಥಪೂರ್ಣವಾಗಿಸಿದೆ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲಕ ಜಾತ್ಯಾತೀತ ಮತ್ತು ಸಮಾಜವಾದಿ ಪ್ರಜಾಪ್ರಭುತ್ವದ ದೇಶ ಕಟ್ಟಲು ಡಾ. ಬಿ.ಆರ್ ಅಂಬೇಡ್ಕರ್ ಎಳೆದು ತಂದು ನಿಲ್ಲಿಸಿದ ವಿಮೋಚನಾ ರಥವನ್ನು ಮುಂದಕ್ಕೆ ಒಯ್ಯಲು ನಾವೆಲ್ಲ ಕೈಜೋಡಿಸೋಣ. ನಾಡಿನ ಜನತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
" ಬಾಬಾ ಸಾಹೇಬರು ರಚಿಸಿದ ಸಂವಿಧಾನ ಇಲ್ಲದಿದ್ದರೆ ನಾನು ನನ್ನೂರಿನಲ್ಲಿ ಕುರಿಯನ್ನೋ, ದನವನ್ನೋ ಕಾಯುತ್ತಾ ಇರುತ್ತಿದ್ದೆ. ನಾನು ಎರಡೆರಡು ಬಾರಿ ಮುಖ್ಯಮಂತ್ರಿಯಾಗಿರುವುದು ಸಂವಿಧಾನದಿಂದ. ನನ್ನ ಬದುಕಿನ ಅನುಕ್ಷಣವೂ ಬಾಬಾ ಸಾಹೇಬರಿಗೆ ನಾನು ಋಣಿ ".
— Siddaramaiah (@siddaramaiah) April 14, 2025
ನಮ್ಮ ಅಂಬೇಡ್ಕರ್ ನಮಗೆ ಆದರ್ಶ pic.twitter.com/YmBul3GvBQ