BREAKING : ಡಿ.6ಕ್ಕೆ ನನ್ನ ಮನಸ್ಸಿನ ಭಾವನೆ ತಿಳಿಸುತ್ತೇನೆ : ಕುತೂಹಲ ಮೂಡಿಸಿದ ಮಾಜಿ ಸಚಿವ V.ಸೋಮಣ್ಣ ಹೇಳಿಕೆ

ಮೈಸೂರು : ಡಿ.6ಕ್ಕೆ ನನ್ನ ಮನಸ್ಸಿನ ಭಾವನೆ ತಿಳಿಸುತ್ತೇನೆ ಎಂದು ಬಿಜೆಪಿಯ ಮಾಜಿ ಸಚಿವ ವಿ. ಸೋಮಣ್ಣ ಹೇಳಿಕೆ ಹೇಳಿದ್ದು, ಬಹಳ ಕುತೂಹಲ ಮೂಡಿಸಿದೆ.

ಬಿಜೆಪಿಯಿಂದ ಅಂತರ ಕಾಯಿದುಕೊಂಡಿದ್ದ ಮಾಜಿ ಸಚಿವ ಸೋಮಣ್ಣ ನಡೆ ಬಹಳ ಕುತೂಹಲ ಮೂಡಿಸಿದೆ. ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಿ ಸೋಮಣ್ಣ ‘ಡಿ.6 ನಂತರ ನಾನು ಬಿಡಿ ಬಿಡಿಯಾಗಿ ಹೇಳುತ್ತೇನೆ, .6ಕ್ಕೆ ನನ್ನ ಮನಸ್ಸಿನ ಭಾವನೆ ತಿಳಿಸುತ್ತೇನೆ. ನನ್ನನ್ನು ಯಾರೂ ಸಂಪರ್ಕಿಸಿಲ್ಲ, ನಾನು ಕೂಡ ಯಾರನ್ನು ಸಂಪರ್ಕಿಸಿಲ್ಲ. ಪಕ್ಷದಲ್ಲಿ ಸೋಮನಹಳ್ಳಿಯ ಮುದುಕಿಯ ಕಥೆ ಆಗಿದೆ, ಡಿ.6 ನಂತರ ಈ ಬಗ್ಗೆ ಬಿಡಿ ಬಿಡಿಯಾಗಿ ಹೇಳುತ್ತೇನೆ,  ಮಾಜಿ ಸಚಿವ ಲಿಂಬಾವಳಿ ಮಾತಿಗೆ ನನ್ನ ಸಮ್ಮಿತಿ ಇದೆ ಎಂದು ವಿ. ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಇನ್ನೂ, ಮಾಜಿ ಸಚಿವ ಸೋಮಣ್ಣ ನನ್ನ ಹಳೇ ಸ್ನೇಹಿತ, ಹಾಗಾಗಿ ಅವರಿಗೆ ನಾನು ಕರೆ ಮಾಡಿದೆ ಎಂದು ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ, ಅವರೇ ನನ್ನನ್ನು ಬಿಜೆಪಿಗೆ ಕರೆದಿದ್ರು ಎಂದು ಸಚಿವ ಕೆ ಎನ್ ರಾಜಣ್ಣ ನಗೆ ಚಟಾಕಿ ಹಾರಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read