‘ಬೇಲ್ ಸಿಗುತ್ತೆ, ಬೆಂಗಳೂರಿಗೆ ಬರ್ತೀನಿ’ : ಸ್ಯಾಂಡಲ್ ವುಡ್ ತಾರೆಯರಿಗೆ ನಟ ದರ್ಶನ್ ಸಂದೇಶ ರವಾನೆ..!

ಬೆಂಗಳೂರು : ‘ಬೇಲ್ ಸಿಗುತ್ತೆ, ಬೆಂಗಳೂರಿಗೆ ಬರ್ತೀನಿ’ ಎಂದು ಸ್ಯಾಂಡಲ್ ವುಡ್ ತಾರೆಯರಿಗೆ ನಟ ದರ್ಶನ್ ಸಂದೇಶ ರವಾನಿಸಿದ್ದಾರೆ.

ಹೈಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ನಟ ದರ್ಶನ್ ಗೆ ಜಾಮೀನು ಸಿಗುತ್ತೋ..? ಅಥವಾ ಜೈಲು ಶಿಕ್ಷೆ ಮುಂದುವರೆಯುತ್ತೋ ಎಂಬುದು ಇಂದು ನಿರ್ಧಾರವಾಗಲಿದೆ. ಆದರೆ ದರ್ಶನ್ ಮಾತ್ರ ಇಂದು ನನಗೆ ಬೇಲ್ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸದಲ್ಲಿದ್ದಾರೆ. ‘ಬೇಲ್ ಸಿಗುತ್ತೆ, ಬೆಂಗಳೂರಿಗೆ ಬರ್ತೀನಿ’ ಎಂದು ತನ್ನನ್ನು ನೋಡಲು ಬಂದ ಪತ್ನಿ ವಿಜಯಲಕ್ಷ್ಮಿ ಮೂಲಕ ಸ್ಯಾಂಡಲ್ ವುಡ್ ತಾರೆಯರಿಗೆ ನಟ ದರ್ಶನ್ ಸಂದೇಶ ರವಾನಿಸಿದ್ದಾರೆ.

ಹೈಕೋರ್ಟ್ ನಲ್ಲಿ ಇಂದು ಕೊಲೆ ಆರೋಪಿ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ದರ್ಶನ್ ಅವರಿಗೆ ಜಾಮೀನು ಸಿಗುತ್ತಾ? ಅಥವಾ ಬೆಂಗಳೂರಿಗೆ ಸ್ಥಳಾಂತರವಾಗುತ್ತಾರಾ ಎನ್ನುವುದು ಗೊತ್ತಾಗಲಿದೆ. ಇದೇ ಮೊದಲ ಬಾರಿಗೆ ವೈದ್ಯಕೀಯ ವರದಿಯೊಂದಿಗೆ ಹೈಕೋರ್ಟ್ ನಲ್ಲಿ ಇಂದು ದರ್ಶನ್ ಪರ ವಕೀಲರು ವಾದ ಮಂಡಿಸುವರು.ದರ್ಶನ್ ಗೆ ಜಾಮೀನು ನೀಡುವಂತೆ ವಕೀಲರು ಮನವಿ ಮಾಡಲಿದ್ದು, ಜಾಮೀನು ಸಿಗದಿದ್ದರೆ ವೈದ್ಯಕೀಯ ವರದಿ ಆಧರಿಸಿ ಬೆಂಗಳೂರಿಗೆ ಶಿಫ್ಟ್ ಮಾಡಲು ಕೋರಲಾಗುವುದು ಎನ್ನಲಾಗಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read