ನಾನು ಜಾಮೀನು ಪಡೆಯೋಕ್ಕೆ ಬಿಪಿ, ಶುಗರ್ ಅಂತ ಕಥೆ ಹೇಳಿ ಓಡಿ ಹೋಗುವವನ್ನಲ್ಲ : ಡಿಕೆಶಿಗೆ ಯತ್ನಾಳ್ ತಿರುಗೇಟು

ಬೆಂಗಳೂರು : ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ರನ್ನು ನಿಮ್ಹಾನ್ಸ್‌ ಗೆ ಸೇರಿಸಬೇಕು ಎಂಬ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಯತ್ನಾಳ್‌ ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್‌ ನಲ್ಲಿ ತಿರುಗೇಟು ನೀಡಿರುವ ಬಸನಗೌಡ ಪಾಟೀಲ್‌ ಯತ್ನಾಳ್‌, ನನ್ನನ್ನು ನಿಮ್ಹಾನ್ಸ್ ಗೆ ಸೇರಿಸಬೇಕು ಎಂದಿರುವ “ಭ್ರಷ್ಟಾಚಾರ ಆರೋಪಿ” ಮೊದಲು “ನಾರಾಯಣ ಹೃದಯಾಲಯದಲ್ಲಿ” ಬೆಡ್ ಬುಕ್ ಮಾಡಿಕೊಳ್ಳಲಿ. ಮತ್ತೆ ಜಾಮೀನು ಪಡೆಯೋಕ್ಕೆ ಇನ್ನೊಂದು ನಾಟಕ ಮಾಡಬೇಕಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

ಜಾಮೀನು ಪಡೆಯೋಕ್ಕೆ ನ್ಯಾಯಾಲಯದ ಮುಂದೆ ಬಿಪಿ, ಶುಗರ್ ಅಂತ ಕಥೆ ಹೇಳಿ ಓಡಿ ಹೋಗುವವನ್ನಲ್ಲ ಈ ಬಸನಗೌಡ ಪಾಟೀಲ್ ನ್ಯಾಯಕ್ಕಾಗಿ ಏನು ಬೇಕಾದರೂ  ಎದುರಿಸುವ ನಾಯಕ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read