ಬೀದಿ ನಾಯಿಗಳಿಗಿಂತ ಮನುಷ್ಯರೇ ಮುಖ್ಯ : ಪ್ರಾಣಿ ಪ್ರಿಯರಿಗೆ ಪರವಾನಗಿ ನೀಡಬೇಕು ಎಂದ ಹೈಕೋರ್ಟ್

ನವದೆಹಲಿ : ಬೀದಿ ನಾಯಿಗಳಿಗಿಂತ ಮನುಷ್ಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಕೇರಳ ಹೈಕೋರ್ಟ್ ತನ್ನ ಅಭಿಪ್ರಾಯಪಟ್ಟಿದೆ.

ಪ್ರಾಣಿ ಪ್ರಿಯರು, ಬೀದಿ ನಾಯಿಗಳಿಗೆ ಏನಾದರೂ ಮಾಡಲು ಬಯಸಿದರೆ, ಸ್ಥಳೀಯ ಸಂಸ್ಥೆ ನಿಯಮಗಳ ಅಡಿಯಲ್ಲಿ ಪರವಾನಗಿ ನೀಡಬೇಕು. ಬೀದಿ ನಾಯಿಗಳಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಪ್ರಾಣಿ ಪ್ರಿಯರು ಸಹ ತಿಳಿದಿರಬೇಕು ಎಂದು ಹೈಕೋರ್ಟ್ ಹೇಳಿದೆ.

ಕಣ್ಣೂರು ನಿವಾಸಿ ರಾಜೀವ್ ಕೃಷ್ಣನ್ ಎಂಬ ವ್ಯಕ್ತಿಯ ನೆರೆಹೊರೆಯವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ರಾಜೀವ್ ಅವರ ಮನೆಯಲ್ಲಿ ಬೀದಿ ನಾಯಿಗಳನ್ನು ಕೊಳಕು ರೀತಿಯಲ್ಲಿ ಇರಿಸಲಾಗಿದೆ ಎಂದು ಈ ಅರ್ಜಿಯಲ್ಲಿ ತಿಳಿಸಲಾಗಿದೆ. ನ್ಯಾಯಮೂರ್ತಿ ಪಿ.ವಿ.ಕುಂಜಿಕೃಷ್ಣನ್ ಅವರ ಪೀಠವು ಬೀದಿ ನಾಯಿಗಳ ವಿಷಯದ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಮತ್ತು ಅಗತ್ಯವಿದ್ದರೆ ಅದಕ್ಕಾಗಿ ಯೋಜಿಸಬೇಕು ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read