2 ಲಕ್ಷದ ನಾಯಿಮರಿ ಬೇಕೆಂದು ಹಠ ಹಿಡಿದ ಪುತ್ರ; ಮನೆಬಿಟ್ಟು ಹೋದ ತಾಯಿ; ಆತ್ಮಹತ್ಯೆಗೆ ಶರಣಾದ ಮಗ

ಹುಬ್ಬಳ್ಳಿ: ಯುವಕನೊಬ್ಬ 2 ಲಕ್ಷ ಮೌಲ್ಯದ ದುಬಾರಿ ನಾಯಿಮರಿ ಕೊಡಿಸುವಂತೆ ಹಠ ಹಿಡಿದು ನಾಯಿ ಪ್ರೀತಿಯೇ ಆತನನ್ನು ಬಲಿ ಪಡೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

24 ವರ್ಷದ ಅಲೆನ್ ವಿನೋದ್ ಭಸ್ಮೆ ಮೃತ ಯುವಕ. ಹುಬ್ಬಳ್ಳಿಯ ಮಿಷನ್ ಕಾಂಪೌಂಡ್ ನಲ್ಲಿ ಈ ಘಟನೆ ನಡೆದಿದೆ. ಯುವಕ ಅಲೆನ್ ವಿನೋದ್ 2 ಲಕ್ಷ ಮೌಲ್ಯದ ದುಬಾರಿ ನಾಯಿಯನ್ನು ಕೊಡಿಸುವಂತೆ ತಾಯಿ ಬಳಿ ಹಠ ಹಿಡಿದಿದ್ದಾನೆ. ಮಗನ ಕಾಟಕ್ಕೆ ಬೇಸತ್ತ ತಾಯಿ ಮನೆ ಬಿಟ್ಟು ಹೋಗಿದ್ದಾರೆ.

ತಾಯಿ ಮನೆ ತೊರೆದು ಹೋಗಿದ್ದಕ್ಕೆ ತೀವ್ರವಾಗಿ ಮನನೊಂದ ಯುವಕ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read