ಹುಬ್ಬಳ್ಳಿ: ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಬಾಷಾಸಾಬ್ ಸಂಕೇಶ್ವರ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕುಟುಂಬದವರು ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದಾಗ ಮೊಬೈಲ್ ನಲ್ಲಿ ವಿಡಿಯೋ ಮಾಡಿಟ್ಟು ಮನೆಯಲ್ಲಿಯೇ ಬಾಷಾಸಾಬ್ ನೇಣಿಗೆ ಶರಣಗಿದ್ದಾರೆ.
ಲಲಿತಾ, ಕಿಟ್ಯಾ, ವಿನೋದ್ ಬಂಕಾಪುರ, ಅಷ್ಟಾಕ್ ಎಂಬುವವರಿಂದ ಬಾಷಾಸಾಬ್ ಸಾಲ ಪಡೆದಿದ್ದರಂತೆ. ಸಾಲ ಹಿಂದಿರುಗಿಸುವಂತೆ ಪ್ರತಿದಿನ ಪೀಡಿಸುತ್ತಿದ್ದರು. ಇದರಿಂದ ನೊಂದು ವಿಡಿಯೋ ಮಾಡಿಟ್ಟು ಬಾಷಾಸಾಬ್ ಸಾವಿಗೆ ಶರಣಾಗಿದ್ದಾರೆ.
ಹುಬ್ಬಳ್ಳಿಯ ಕಸಬಾಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.