ಯಾದಗಿರಿ : KKRTC ಬಸ್ ಹರಿದು 2 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನಲ್ಲಿ ನಡೆದಿದೆ.
ಬಸಪ್ಪ ಎಂಬುವವರ 2 ವರ್ಷದ ಮಗು ಲಕ್ಷ್ಮಿ ಮೃತಪಟ್ಟಿದ್ದು, ಪೋಷಕರು ರಸ್ತೆಯಲ್ಲಿ ಬಾಲಕಿಯ ಶವವಿಟ್ಟು ರಸ್ತೆ ತಡೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಸುರಪುರ ತಾಲೂಕಿನ ಮಂಗಳೂರು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಮಗು ಆಟವಾಡುತ್ತಿದ್ದಾಗ ಬಸ್ ಹರಿದಿದೆ ಎನ್ನಲಾಗಿದೆ.
