ಬಿಜೆಪಿ ನಾಯಕನಿಗೆ ಹೆಚ್ಐವಿ ಇಂಜೆಕ್ಷನ್ ನೀಡಲು ಸಂಚು: ಇನ್ಸ್ಪೆಕ್ಟರ್ ಅರೆಸ್ಟ್: ಮುನಿರತ್ನಗೆ ಸಂಕಷ್ಟ

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಬ್ಬಗೋಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ವಿಶೇಷ ತನಿಖಾ ತಂಡ(ಎಸ್ಐಟಿ) ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

ಮುನಿರತ್ನ ವಿರುದ್ಧದದ ಅತ್ಯಾಚಾರ ಪ್ರಕರಣದ ತನಿಖೆಯ ವೇಳೆ ಅಪರಾಧಿಕಾ ಸಂಚಿನಲ್ಲಿ ಪಾತ್ರ ವಹಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ಅಯ್ಯಣ್ಣ ರೆಡ್ಡಿ ಅವರನ್ನು ಬಂಧಿಸಲಾಗಿದೆ. ಹೆಬ್ಬಗೋಡಿ ಠಾಣೆ ಇನ್ಸ್ಪೆಕ್ಟರ್ ಆಗಿದ್ದ ಅಯ್ಯಣ್ಣ ರೆಡ್ಡಿ ಮುನಿರತ್ನ ಅವರಿಗೆ ಆಪ್ತರಾಗಿದ್ದು, ರಾಜ್ಯದ ಬಿಜೆಪಿಯ ಪ್ರಭಾವಿ ನಾಯಕರೊಬ್ಬರಿಗೆ ಹೆಚ್ಐವಿ ಚುಚ್ಚುಮದ್ದು ನೀಡಲು ಕ್ರಿಮಿನಲ್ ಸಂಚು ರೂಪಿಸಿದ್ದರು. ಮುನಿರತ್ನಂ ಬಂಧನದ ನಂತರ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಬಗ್ಗೆ ಅಯ್ಯಣ್ಣ ರೆಡ್ಡಿ ವಿರುದ್ಧ ಸಿಎಂಗೆ ದೂರು ಸಲ್ಲಿಕೆಯಾಗಿದ್ದು, ತನಿಖೆ ನಡೆಸಿದ ಎಸ್ಐಟಿ ರೆಡ್ಡಿಯನ್ನು ಬಂಧಿಸಿದ್ದು, ಶಾಸಕ ಮುನಿರತ್ನ ಅವರಿಗೆ ಇನ್ನಷ್ಟು ಸಂಕಷ್ಟ ಶುರುವಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read