ಮಹಾ ಕುಂಭಮೇಳದಲ್ಲಿ ಕೀಟಲೆ ಮಾಡಿದ ಯುವಕನಿಗೆ ಬಾರಿಸಿದ ಸಾಧು | VIDEO VIRAL

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕೀಟಲೆ ಮಾಡಿದ ಯುವಕನೊಬ್ಬನಿಗೆ ಸಾಧು ಕಪಾಳಮೋಕ್ಷ ಮಾಡಿದ್ದು, ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತನ್ನನ್ನು ನಕಲು ಮಾಡಿ ವ್ಯಂಗ್ಯ ಮಾಡಿದ್ದಕ್ಕಾಗಿ ಸಾಧು ಯುವಕನಿಗೆ ಕಪಾಳಮೋಕ್ಷ ಮಾಡುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ನೆಟ್ಟಿಗರು ಇದಕ್ಕೆ ವಿವಿಧ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

“ಬ್ರೋ ಬಾಬಾವನ್ನು ನಕಲು ಮಾಡಲು ಪ್ರಯತ್ನಿಸಿದ ಯುವಕನಿಗೆ ತಕ್ಕ ಹೊಡೆತ ಬಿದ್ದಿತು” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ತಮ್ಮ X ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ವೀಡಿಯೊದಲ್ಲಿ ಒಬ್ಬ ಸಾಧು ತನ್ನ ಕೈಯನ್ನು ಮೇಲೆತ್ತಿಕೊಂಡು ಸಾಗುವುದನ್ನು ಕಾಣಬಹುದು. ಸಾಧುವನ್ನು ನೋಡಿದ ಯುವಕ ತಾನೂ ಕೂಡ ಅರ ರೀತಿಯಲ್ಲೇ ಕೈ ಮೇಲೆತ್ತಿ ನಕಲು ಮಾಡಲು ಪ್ರಾರಂಭಿಸುತ್ತಾನೆ. ಇದರಿಂದ ಕೋಪಗೊಂಡ ಸಾಧು ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read