ವಿನಾ ಕಾರಣದಿಂದ ಕಾಡುವ ಭಯಕ್ಕೆ ಇಲ್ಲಿದೆ ಪರಿಹಾರ

ಕೆಲವು ಬಾರಿ ಅನಗತ್ಯ ಭಯ ಕಾಡಲು ಶುರುವಾಗುತ್ತದೆ. ಯಾವುದೇ ಕಾರಣವಿಲ್ಲದೆ, ಮುನ್ಸೂಚನೆಯಿಲ್ಲದೆ ಭಯ ಕಾಡುತ್ತದೆ. ಅನೇಕರಿಗೆ ಈ ಸಮಸ್ಯೆ ಬರುತ್ತದೆ. ಈ ಸಂದರ್ಭದಲ್ಲಿ ವೈದ್ಯರನ್ನು ಭೇಟಿಯಾಗಬೇಕು. ಜೊತೆಗೆ ಗ್ರಹ ದೋಷ ಪರಿಹಾರ ಮಾಡಿಕೊಳ್ಳಬೇಕು. ಗ್ರಹ ದೋಷದಿಂದ ಸಮಸ್ಯೆ ಕಾಡುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.

ಜ್ಯೋತಿಷ್ಯದಲ್ಲಿ ಚಂದ್ರನನ್ನು ಮನಸ್ಸಿನ ಒಂದು ಭಾಗವೆಂದು ಪರಿಗಣಿಸಲಾಗಿದೆ. ಭಯ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಚಂದ್ರನ ಕೆಟ್ಟ ಸ್ಥಿತಿಯಿಂದಾಗಿ, ಮನಸ್ಸು ವಿಚಲಗೊಳ್ಳುತ್ತದೆ. ಆತಂಕ ಮತ್ತು ಭಯ ಮುಂತಾದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಇದಲ್ಲದೆ ರಾಹು ಕೂಡ ಮನಸ್ಸಿನಲ್ಲಿ ಗೊಂದಲವನ್ನು ಉಂಟುಮಾಡುತ್ತಾನೆ. ಚಂದ್ರ ಮತ್ತು ರಾಹು ಅವರ ಸ್ಥಾನವು ಮನಸ್ಸಿನಲ್ಲಿ ವಿಲಕ್ಷಣ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಜ್ಯೋತಿಷ್ಯದ ಪ್ರಕಾರ, ಚಂದ್ರನು ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದಾಗ ಭಯ ಕಾಡುತ್ತದೆ. ಚಂದ್ರನ ಮೇಲೆ ಶನಿ ಪ್ರಭಾವವಿದ್ದರೆ ಅಥವಾ ಚಂದ್ರ- ಕೇತು ಸಂಬಂಧವಿದ್ದಲ್ಲಿ ಮನಸ್ಸಿನಲ್ಲಿ ಭಯ ಮತ್ತು ಆತಂಕದ ಸೃಷ್ಟಿಯಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ರಾಹು ಪ್ರಭಾವವಿದ್ದರೂ ಭಯ ಕಾಡುತ್ತದೆ. ಸಂಜೆ ಸಮಯದಲ್ಲಿ ಜನಿಸಿದವರಿಗೂ ಭಯ ಹೆಚ್ಚಾಗಿ ಕಾಡುತ್ತದೆ.

ಪ್ರತಿದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಸೂರ್ಯನಿಗೆ ನೀರನ್ನು ಅರ್ಪಿಸಿ. ಸೋಮವಾರ ಶಿವನ ಪೂಜೆ ಮಾಡಿ. ಮಾಂಸಾಹಾರ, ಮಾದಕ ಆಹಾರ ಮತ್ತು ಎಣ್ಣೆ-ಮಸಾಲೆಯುಕ್ತ ಆಹಾರಗಳಿಂದ ದೂರವಿರಿ. ಏಕಾದಶಿ ಉಪವಾಸ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read