KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ವೈದ್ಯನಿಂದ ʼವಾಚ್‌ʼ ಕಳುವಿನ ಹುಸಿ ಆರೋಪ; CISF ನಿಂದ ಅಸಲಿ ಸತ್ಯ ಬಹಿರಂಗ

Published January 28, 2025 at 9:31 am
Share
SHARE

ಗುರುಗ್ರಾಮ್‌ನ ಶಸ್ತ್ರಚಿಕಿತ್ಸಕ ಡಾ. ತುಷಾರ್ ಮೆಹ್ತಾ, ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ತಾವು ಧರಿಸಿದ್ದ ಆಪಲ್‌ ವಾಚ್‌ ಕಳವು ಮಾಡಿರುವುದಾಗಿ ಹೇಳಿದ್ದು, ಆದರೆ, ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಕೇಂದ್ರ ಕೈಗಾರಿಕಾ ಸುರಕ್ಷಾ ಪಡೆ (ಸಿಐಎಸ್‌ಎಫ್) ಅಧಿಕಾರಿಗಳು ಆಪಲ್ ವಾಚ್ ಕಳವು ಆರೋಪ ಹುಸಿ ಎಂದು ಬಹಿರಂಗಪಡಿಸಿದೆ. ಇದಾದ ನಂತರ ಡಾ. ತುಷಾರ್ ಮೆಹ್ತಾ ʼಎಕ್ಸ್‌ʼ ನಲ್ಲಿನ ಪ್ರೊಫೈಲ್ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಪ್ರಕರಣದ ವಿವರ: ಕೆಲ ದಿನಗಳ ಹಿಂದೆ ಡಾ. ಮೆಹ್ತಾ ತಮ್ಮ ʼಎಕ್ಸ್ʼ ಹ್ಯಾಂಡಲ್‌ನಿಂದ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐ) ಟರ್ಮಿನಲ್ 3 ರಲ್ಲಿ ಭದ್ರತಾ ತಪಾಸಣೆ ಮಾಡಿಸಿಕೊಳ್ಳುವಾಗ ತಮ್ಮ ಆಪಲ್ ವಾಚ್ ಕಳವು ಆಗಿದೆ ಎಂದು ಪೋಸ್ಟ್ ಮಾಡಿದ್ದರು. ತಮ್ಮ ಪೋಸ್ಟ್‌ನಲ್ಲಿ, ಮೆಹ್ತಾ ಆಪಲ್ ವಾಚ್ ಅನ್ನು ತೆಗೆದು ಸ್ಕ್ಯಾನಿಂಗ್ ಯಂತ್ರದ ಮೂಲಕ ಹಾದುಹೋಗುವ ಟ್ರೇನಲ್ಲಿ ಇಟ್ಟ ನಂತರ ಅದು ಕಾಣೆಯಾಗಿತ್ತು ಎಂದು ಹೇಳಿದ್ದರು.

ಮೆಹ್ತಾ ಈ ಕುರಿತು ಸಿಐಎಸ್‌ಎಫ್ ವ್ಯಕ್ತಿಯೊಂದಿಗೆ ಮಾತನಾಡಿದ್ದು, ನಂತರ ಸಂಶಯಾಸ್ಪದವಾಗಿ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಯನ್ನು ನೋಡಿದೆ ಎಂದು ತಮ್ಮ ಪೋಸ್ಟ್‌ ನಲ್ಲಿ ವಿವರಿಸಿದ್ದ ಮೆಹ್ತಾ, ಆ ವ್ಯಕ್ತಿಯನ್ನು ಎದುರಿಸಿ ಅವನ ಜೇಬಿನಿಂದ ಗಡಿಯಾರವನ್ನು ಬಲವಂತವಾಗಿ ತೆಗೆದುಕೊಂಡಿದ್ದಾಗಿ ಹೇಳಿದ್ದರು. ಆ ಬಳಿಕ ವಿಮಾನ ನಿಲ್ದಾಣದ ಹೀಲಿಯೋಸ್ ಶೋರೂಮ್‌ನ ಒಬ್ಬ ವ್ಯಕ್ತಿ ಆ ವ್ಯಕ್ತಿಯ ಪರವಾಗಿ ತಮ್ಮ ಜೊತೆ ಜಗಳವಾಡಿದ್ದರು ಎಂದು ಮೆಹ್ತಾ ತಿಳಿಸಿದ್ದರು.

ಡಾ. ಮೆಹ್ತಾ ಅವರ ಹೇಳಿಕೆಗೆ, ಸಿಐಎಸ್‌ಎಫ್ ಮತ್ತು ದೆಹಲಿ ವಿಮಾನ ನಿಲ್ದಾಣವು ತಮ್ಮ ಅಧಿಕೃತ ಹ್ಯಾಂಡಲ್‌ಗಳಿಂದ ಪ್ರತಿಕ್ರಿಯಿಸಿದೆ. ಸಿಐಎಸ್‌ಎಫ್ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮೆಹ್ತಾ ಭದ್ರತಾ ತಪಾಸಣೆಯ ನಂತರ ತನ್ನ ವಾಚ್ ಧರಿಸಿಕೊಂಡು ಹೋಗುತ್ತಿರುವುದು ಮತ್ತು ನಂತರ ಯಾವುದೇ ಸಿಐಎಸ್‌ಎಫ್ ಸಿಬ್ಬಂದಿಯೊಂದಿಗೆ ಸಂವಹನ ನಡೆಸದೆ ಬೋರ್ಡಿಂಗ್ ಗೇಟ್‌ಗೆ ತೆರಳಿದ್ದು ಮತ್ತು ಸುಗಮವಾಗಿ ವಿಮಾನ ಹತ್ತಿದ್ದು ಕಂಡುಬಂದಿದೆ ಎಂದು ಹೇಳಿದೆ. ದೆಹಲಿ ವಿಮಾನ ನಿಲ್ದಾಣವೂ ಸಹ ಸಿಐಎಸ್‌ಎಫ್ ಹೇಳಿಕೆಯನ್ನು ದೃಢಪಡಿಸಿದೆ.

ವಿಮಾನ ನಿಲ್ದಾಣವು ‘ಯಾವುದೇ ಸಂಶಯಾಸ್ಪದ ಚಟುವಟಿಕೆ ಗಮನಿಸಲಾಗಿಲ್ಲ’ ಮತ್ತು ‘ಆರೋಪಗಳು ಸುಳ್ಳು’ ಎಂದು ಹೇಳಿದೆ. ಡಾ. ಮೆಹ್ತಾ ತಮ್ಮ ಆರೋಪಗಳನ್ನು ಅಧಿಕಾರಿಗಳು ಹುಸಿಯೆಂದು ಹೇಳಿದ ಕಾರಣ ಎಕ್ಸ್‌ನಲ್ಲಿ ತಮ್ಮ ಖಾತೆಯನ್ನು ಅಳಿಸಿದ್ದಾರೆಯೇ ಎಂಬುದು ಈಗ ತಿಳಿದಿಲ್ಲ.

Dr Tushar Mehta's original post

CISF's reply to Mehta's post

Delhi Airport's reply to Dr Tushar Mehta's claim

You Might Also Like

BREAKING: ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ನೂರಾರು ಹಂದಿಗಳು ಸಾವು: ಸಾಗಾಟ, ಮರಾಟ ನಿಷೇಧ: 57 ಹಂದಿ ಕೊಲ್ಲಲು ನಿರ್ಧಾರ

ಕೆಂಪೇಗೌಡ ಏರ್ಪೋರ್ಟ್ ಗೆ ಮತ್ತೊಂದು ಗರಿ: ಎಸಿಐ ಮಾನ್ಯತೆ ಪಡೆದ ದೇಶದ ಮೊದಲ ವಿಮಾನ ನಿಲ್ದಾಣ

ಪ್ರಯಾಣಿಕರಿಗೆ ಗುಡ್ ನ್ಯೂಸ್: ಮಧುರೈ-ಬೆಂಗಳೂರು, ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೇರಿ 7 ಮಾರ್ಗಗಳಲ್ಲಿ ‘ವಂದೇ ಭಾರತ್’ ಎಕ್ಸ್‌ ಪ್ರೆಸ್ ರೈಲುಗಳು ಮೇಲ್ದರ್ಜೆಗೆ

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಸ್ಟಾರ್ ರಜನಿಕಾಂತ್ ‘ಕೂಲಿ’: 500 ಕೋಟಿ ರೂ. ದಾಟಿದ ಕಲೆಕ್ಷನ್

BREAKING NEWS: 75 ವರ್ಷವಾದವರು ಯಾರೂ ನಿವೃತ್ತರಾಗಬೇಕಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್ ಯುಟರ್ನ್

TAGGED:Gurugramಆರೋಪಆಪಲ್ ವಾಚ್ ಕಳವುಗುರುಗ್ರಾಮ್ ಸರ್ಜನ್ತುಷಾರ್ ಮೆಹ್ತಾSurgeon Tushar MehtaDeletes X Account
Share This Article
Facebook Copy Link Print

Latest News

BREAKING: ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ನೂರಾರು ಹಂದಿಗಳು ಸಾವು: ಸಾಗಾಟ, ಮರಾಟ ನಿಷೇಧ: 57 ಹಂದಿ ಕೊಲ್ಲಲು ನಿರ್ಧಾರ
ಕೆಂಪೇಗೌಡ ಏರ್ಪೋರ್ಟ್ ಗೆ ಮತ್ತೊಂದು ಗರಿ: ಎಸಿಐ ಮಾನ್ಯತೆ ಪಡೆದ ದೇಶದ ಮೊದಲ ವಿಮಾನ ನಿಲ್ದಾಣ
ಪ್ರಯಾಣಿಕರಿಗೆ ಗುಡ್ ನ್ಯೂಸ್: ಮಧುರೈ-ಬೆಂಗಳೂರು, ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೇರಿ 7 ಮಾರ್ಗಗಳಲ್ಲಿ ‘ವಂದೇ ಭಾರತ್’ ಎಕ್ಸ್‌ ಪ್ರೆಸ್ ರೈಲುಗಳು ಮೇಲ್ದರ್ಜೆಗೆ
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಸ್ಟಾರ್ ರಜನಿಕಾಂತ್ ‘ಕೂಲಿ’: 500 ಕೋಟಿ ರೂ. ದಾಟಿದ ಕಲೆಕ್ಷನ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹೆರಿಗೆ ಮಾಡಿಸಿದ ನರ್ಸ್: ತೀವ್ರ ರಕ್ತಸ್ರಾವದಿಂದ ಬಾಣಂತಿ, ಮಗು ಸಾವು
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?

Automotive

ALERT : ನೀವು ಕರೆ ಮಾಡುವಾಗ ‘ಇಂಟರ್ ನೆಟ್’ ಆನ್ ಮಾಡಿಡುತ್ತೀರಾ..? ಮಿಸ್ ಮಾಡದೇ ಈ ಸುದ್ದಿ ಓದಿ
BIG NEWS : ವಾಹನಗಳನ್ನು ಏಕಾಏಕಿ ಅಡ್ಡಗಟ್ಟಿ ‘ಕೀ’ ಕಸಿಯುವಂತಿಲ್ಲ :  ಸಂಚಾರಿ ಪೊಲೀಸರಿಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ.!
ಮಳೆಗಾಲದಲ್ಲಿ ನಿಮ್ಮ ವಾಹನದ ಬ್ರೇಕ್‌ ಹೇಗೆ ನಿರ್ವಹಣೆ ಹೇಗೆ ? ನಿಮಗೆ ತಿಳಿದಿರಲಿ ಈ ಉಪಯುಕ್ತ ಮಾಹಿತಿ

Entertainment

BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
ಕಿರುತೆರೆ ಪ್ರೇಕ್ಷಕರಿಗೆ ಗುಡ್ ನ್ಯೂಸ್ : ಬಿಗ್ ಬಾಸ್-12 ಆರಂಭಕ್ಕೆ ಮುಹೂರ್ತ ಫಿಕ್ಸ್
BREAKING : ನಟ ‘ರಿಷಬ್ ಶೆಟ್ಟಿ’ ಹುಟ್ಟುಹಬ್ಬಕ್ಕೆ ಕಾಂತಾರ-1 ಪೋಸ್ಟರ್ ಗಿಫ್ಟ್ : ಅ. 2 ರಂದು 7 ಭಾಷೆಗಳಲ್ಲಿ ಸಿನಿಮಾ ರಿಲೀಸ್.!

Sports

BIG NEWS: ಅಹಮದಾಬಾದ್ ನಲ್ಲಿ 2030ರ ಕಾಮನ್‌ ವೆಲ್ತ್ ಕ್ರೀಡಾಕೂಟ ಆಯೋಜನೆ: ಬಿಡ್‌ ಗೆ ಸಚಿವ ಸಂಪುಟ ಅನುಮೋದನೆ
BREAKING : ‘IPL’ ಗೆ ನಿವೃತ್ತಿ ಘೋಷಿಸಿದ ಆರ್. ಅಶ್ವಿನ್
BREAKING : ‘ಆನ್ ಲೈನ್ ಗೇಮ್’ ಗೆ ಕೇಂದ್ರ ಸರ್ಕಾರ ನಿಷೇಧ : ‘ಡ್ರೀಮ್ 11 ಪ್ರಾಯೋಜಕತ್ವ’ ಮುರಿದುಕೊಂಡ ‘BCCI’.!

Special

ಅಡುಗೆಗೆ ಯಾವಾಗಲೂ ನೈಸರ್ಗಿಕ ಬಣ್ಣ ಬಳಸಿ
ಈ ಕೆಲ ಹವ್ಯಾಸಗಳಲ್ಲಿ ಬದಲಾಗಲ್ಲವಂತೆ ಪುರುಷರು…!
ಬೇಸಿಗೆಯಲ್ಲಿ ಬಾಣಂತಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಬಹಳ ಮುಖ್ಯ ಈ ಆರೈಕೆ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?