KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಸರಿಯಾದ ಸಿದ್ಧತೆ ಇಲ್ಲದೆ ಇ- ಖಾತೆ ಕಡ್ಡಾಯ ಮಾಡಿದ ಸರ್ಕಾರ: ರಾಜ್ಯಾದ್ಯಂತ ಸರ್ವರ್ ಸಮಸ್ಯೆ: ಆಸ್ತಿ ಮಾಲೀಕರಿಗೆ ಸಂಕಷ್ಟ, ನೋಂದಣಿಗೆ ಪರದಾಟ

Published October 18, 2024 at 6:28 am
Share
SHARE

ಬೆಂಗಳೂರು: ಸರಿಯಾದ ಸಿದ್ಧತೆ ಇಲ್ಲದೆ ಇ- ಖಾತೆ ಕಡ್ಡಾಯ ಮಾಡಲಾಗಿದ್ದು, ರಾಜ್ಯ ಸರ್ಕಾರ ಜಾರಿಗೊಳಿಸಿದ ಹೊಸ ವ್ಯವಸ್ಥೆಯಿಂದ ಆಸ್ತಿ ಮಾಲೀಕರಿಗೆ ಸಂಕಷ್ಟ ಎದುರಾಗಿದೆ.

ಆಸ್ತಿ ನೋಂದಣಿಯಾಗದೆ ಜನ ಹೈರಾಣಾಗಿದ್ದು, ಅಡಮಾನ ಸಾಲ ಪಡೆಯಲು ಕೂಡ ಅಡ್ಡಿಯಾಗಿದೆ. ರಾಜ್ಯದಾದ್ಯಂತ ಸರ್ವರ್ ಸಮಸ್ಯೆ ಉಂಟಾಗಿದ್ದು, ಸಮಸ್ಯೆ ಬಗೆಹರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಸಮರ್ಪಕ ಸಿದ್ಧತೆ ಕೈಗೊಳ್ಳದೆ ರಾಜ್ಯದಾತ್ಯಂತ ದಸ್ತಾವೇಜು ನೋಂದಣಿಗೆ ಸರ್ಕಾರ ಇ-ಖಾತಾ ಕಡ್ಡಾಯಗೊಳಿಸಿರುವುದರಿಂದ ಆಸ್ತಿ ಮಾಲೀಕರು ತೊಂದರೆಗೆ ಸಿಲುಕಿದ್ದಾರೆ. ಸರ್ವರ್ ಸಮಸ್ಯೆ ಕಾರಣ, ಖಾತೆಗಳಲ್ಲಿನ ದೋಷ, ಅಗತ್ಯ ದಾಖಲೆಗಳ ಕೊರತೆ, ಇತರೆ ಕಾರಣದಿಂದ ಇ- ಖಾತೆ ದೊರೆಯದೆ ಆಸ್ತಿ ಮಾಲೀಕರು ಪರದಾಡುವಂತಾಗಿದೆ.

ಇ- ಖಾತೆ ಇಲ್ಲದೆ ಆಸ್ತಿ ನೋಂದಣಿ ಸಾಧ್ಯವಿಲ್ಲದ ಕಾರಣ ಸಾರ್ವಜನಿಕರು ಆಸ್ತಿ ನೋಂದಣಿ, ಅಡಮಾನ ಸಾಲ ಪಡೆಯುವುದು ಸೇರಿ ಯಾವುದೇ ವಹಿವಾಟು ನಡೆಸಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಂದಾಯ ನಿವೇಶನ ಮತ್ತು ಅದರಲ್ಲಿ ಮನೆ ನಿರ್ಮಿಸಿದವರಿಗೆ ಇ- ಖಾತೆ ಇಲ್ಲದೆ ಮಾಲೀಕತ್ವ ಸಾಬೀತುಪಡಿಸುವುದು ಹೇಗೆ? ಪರಭಾರೆ ಮಾಡುವುದು ಹೇಗೆ ಎನ್ನುವ ಆತಂಕ ಎದುರಾಗಿದೆ.

ಇತ್ತೀಚೆಗೆ ರಾಜ್ಯಾದ್ಯಂತ ಸ್ಥಿರಾಸ್ತಿ ನೋಂದಣಿಗೆ ಇ- ಖಾತೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಆನ್ಲೈನ್ ನಲ್ಲಿ ಇ- ಖಾತೆ ಪಡೆಯಬಹುದು, ಸರ್ಕಾರಿ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ ಎಂದು ಕಂದಾಯ ಇಲಾಖೆ ಹೇಳಿದೆ. ಇ- ಖಾತೆ ಪಡೆಯಲು ವಿಧಿಸಿದ ಕಠಿಣ ನಿಯಮಗಳಿಂದಾಗಿ ಆನ್ಲೈನ್ ನಲ್ಲಿ ಖಾತೆ ಪಡೆಯಲಾಗದೆ ಜನರಿಗೆ ಸಮಸ್ಯೆ ಎದುರಾಗಿದೆ. ಆಸ್ತಿ ಮಾರಾಟ, ಖರೀದಿಗೆ ಇ- ಖಾತೆ ಬೇಕಿದ್ದು, ಅದನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ.

ಇ-ಖಾತೆ ಕಡ್ಡಾಯ ಮಾಡಿದ ನಂತರವೂ ಇ- ಖಾತೆ ಇಲ್ಲದವರಿಗೆ ಇತರೆ ಕಾಲಂನಲ್ಲಿ ನಮೂದಿಸಿ ಆಸ್ತಿ ನೋಂದಣಿ ಮಾಡಲಾಗುತ್ತಿತ್ತು. ಈ ರೀತಿಯ ನೋಂದಣಿ ಈಗ ಸ್ಥಗಿತಗೊಳಿಸಲಾಗಿದ್ದು, ಅನೇಕ ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಶೇಕಡ 90ರಷ್ಟು ಮನೆ ನಿವೇಶನಗಳಿಗೆ ಕಂದಾಯ ಇಲಾಖೆ ನಿಯಮದಡಿ ಇ- ಖಾತೆ ದೊರೆಯುವುದಿಲ್ಲ. ಅವರ ಆಸ್ತಿ ಪರಭಾರೆ ಕೂಡ ಕಷ್ಟವಾಗಿದೆ. ಇ- ಖಾತೆ ಕಡ್ಡಾಯದಿಂದಾಗಿ ಅನೇಕ ನೋಂದಣಿಗೆ ಸಮಸ್ಯೆಯಾಗಿದೆ ಎನ್ನಲಾಗಿದೆ.

You Might Also Like

ಪ್ರಯಾಣಿಕರಿಗೆ ಗುಡ್ ನ್ಯೂಸ್: ಮಧುರೈ-ಬೆಂಗಳೂರು, ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೇರಿ 7 ಮಾರ್ಗಗಳಲ್ಲಿ ‘ವಂದೇ ಭಾರತ್’ ಎಕ್ಸ್‌ ಪ್ರೆಸ್ ರೈಲುಗಳು ಮೇಲ್ದರ್ಜೆಗೆ

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಸ್ಟಾರ್ ರಜನಿಕಾಂತ್ ‘ಕೂಲಿ’: 500 ಕೋಟಿ ರೂ. ದಾಟಿದ ಕಲೆಕ್ಷನ್

BREAKING NEWS: 75 ವರ್ಷವಾದವರು ಯಾರೂ ನಿವೃತ್ತರಾಗಬೇಕಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್ ಯುಟರ್ನ್

ಕುಡಿಯದಿದ್ರೂ ಪಾಸಿಟಿವ್ ತೋರಿಸಿದ ಡ್ರಿಂಕ್ ಅಂಡ್ ಡ್ರೈವ್ ಪತ್ತೆ ಯಂತ್ರ: ಸರ್ಕಾರ, ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿ

GOOD NEWS: ಸಹಕಾರ ಇಲಾಖೆಯಲ್ಲಿ 500ಕ್ಕೂ ಅಧಿಕ ಖಾಲಿ ಹುದ್ದೆ ಭರ್ತಿಗೆ ಸಿಎಂ ಸಿದ್ಧರಾಮಯ್ಯ ಸೂಚನೆ

TAGGED:Govtತೊಂದರೆಸರ್ಕಾರe-Account mandatoryPreparationಆಸ್ತಿ ನೋಂದಣಿಇ-ಖಾತಾ ಕಡ್ಡಾಯProperty OwnersಮಾಲೀಕರುServer Problem
Share This Article
Facebook Copy Link Print

Latest News

ಪ್ರಯಾಣಿಕರಿಗೆ ಗುಡ್ ನ್ಯೂಸ್: ಮಧುರೈ-ಬೆಂಗಳೂರು, ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೇರಿ 7 ಮಾರ್ಗಗಳಲ್ಲಿ ‘ವಂದೇ ಭಾರತ್’ ಎಕ್ಸ್‌ ಪ್ರೆಸ್ ರೈಲುಗಳು ಮೇಲ್ದರ್ಜೆಗೆ
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂಪರ್ ಸ್ಟಾರ್ ರಜನಿಕಾಂತ್ ‘ಕೂಲಿ’: 500 ಕೋಟಿ ರೂ. ದಾಟಿದ ಕಲೆಕ್ಷನ್
BREAKING NEWS: 75 ವರ್ಷವಾದವರು ಯಾರೂ ನಿವೃತ್ತರಾಗಬೇಕಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್ ಯುಟರ್ನ್
ಕುಡಿಯದಿದ್ರೂ ಪಾಸಿಟಿವ್ ತೋರಿಸಿದ ಡ್ರಿಂಕ್ ಅಂಡ್ ಡ್ರೈವ್ ಪತ್ತೆ ಯಂತ್ರ: ಸರ್ಕಾರ, ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹೆರಿಗೆ ಮಾಡಿಸಿದ ನರ್ಸ್: ತೀವ್ರ ರಕ್ತಸ್ರಾವದಿಂದ ಬಾಣಂತಿ, ಮಗು ಸಾವು
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?

Automotive

ಹಾಡಹಗಲೇ ಸ್ಕೂಟರ್ ಕದ್ದ ಯುವತಿಯರು ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕೃತ್ಯ | Viral Video
BIG NEWS : ‘ದ್ವಿಚಕ್ರ ವಾಹನ ಸವಾರ’ರಿಗೆ ಬಿಗ್ ಶಾಕ್ : ಜುಲೈ 15 ರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಟೋಲ್ ತೆರಿಗೆ’ ಪಾವತಿ ಕಡ್ಡಾಯ.!
FACT CHECK : 3,000 ಕ್ಕಿಂತ ಹೆಚ್ಚಿನ ‘UPI’ ವಹಿವಾಟುಗಳ ಮೇಲೆ ಶುಲ್ಕ..? : ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು.!

Entertainment

ಮದುವೆ ಬಳಿಕ ಅನುಶ್ರೀ ಮೊದಲ ಮಾತು: ‘ಸಿಂಪಲ್ ಲವ್ ಸ್ಟೋರಿ’ ಬಗ್ಗೆ ಹೇಳಿದ ನಿರೂಪಕಿ!
BREAKING : ಹೃದಯಾಘಾತದಿಂದ ಬಾಲಿವುಡ್ ಹಿರಿಯ ನಟ, ನಿರ್ಮಾಪಕ ಧೀರಜ್ ಕುಮಾರ್ ನಿಧನ |Dheeraj Kumar Passed Away
BREAKING: ನಟ ದರ್ಶನ್ ಮತ್ತೆ ಅರೆಸ್ಟ್

Sports

BIG NEWS: ಅಹಮದಾಬಾದ್ ನಲ್ಲಿ 2030ರ ಕಾಮನ್‌ ವೆಲ್ತ್ ಕ್ರೀಡಾಕೂಟ ಆಯೋಜನೆ: ಬಿಡ್‌ ಗೆ ಸಚಿವ ಸಂಪುಟ ಅನುಮೋದನೆ
BREAKING : ‘IPL’ ಗೆ ನಿವೃತ್ತಿ ಘೋಷಿಸಿದ ಆರ್. ಅಶ್ವಿನ್
BREAKING : ‘ಆನ್ ಲೈನ್ ಗೇಮ್’ ಗೆ ಕೇಂದ್ರ ಸರ್ಕಾರ ನಿಷೇಧ : ‘ಡ್ರೀಮ್ 11 ಪ್ರಾಯೋಜಕತ್ವ’ ಮುರಿದುಕೊಂಡ ‘BCCI’.!

Special

ಹಣ್ಣು ತರಕಾರಿ ತಿನ್ನದ ಮಕ್ಕಳಿಗೆ ಮಾಡಿ ಈ ಉಪಾಯ
ಬಾಯಿಯ ದುರ್ವಾಸನೆ ದೂರ ಮಾಡಲು ಬೆಸ್ಟ್‌ ಈ ಮೌತ್ ವಾಶ್
ಬಾಯಿಗೆ ಕಹಿ, ಉದರಕ್ಕೆ ಸಿಹಿ ʼಹಾಗಲಕಾಯಿʼ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?