BREAKING : ರೈತರಿಗೆ ಗುಡ್ ನ್ಯೂಸ್ : ಕೇಂದ್ರ ಸರ್ಕಾರದಿಂದ 6 ‘ಹಿಂಗಾರು ಬೆಳೆ’ಗಳ ಬೆಂಬಲ ಬೆಲೆ ಹೆಚ್ಚಳ

ನವದೆಹಲಿ: 2024-25ನೇ ಸಾಲಿಗೆ ಆರು ರೀತಿಯ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೆಚ್ಚಳವನ್ನು ಘೋಷಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಂಗಳವಾರ ದೃಢಪಡಿಸಿದ್ದಾರೆ.

ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಠಾಕೂರ್, ಕೇಂದ್ರ ಸರ್ಕಾರವು 2024-25ನೇ ಸಾಲಿಗೆ ಗೋಧಿ ಎಂಎಸ್ಪಿಯನ್ನು ಕ್ವಿಂಟಾಲ್ ಗೆ 150 ರೂ.ಗಳಿಂದ 2,275 ರೂ.ಗೆ ಹೆಚ್ಚಿಸಿದೆ. ತಿಲ್ಹಾನ್ ಮತ್ತು ಸಾಸಿವೆಯ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ ಗೆ 200 ರೂ., ಮಸೂರ್ ಪ್ರತಿ ಕ್ವಿಂಟಾಲ್ ಗೆ 425 ರೂ., ಗೋಧಿ ಪ್ರತಿ ಕ್ವಿಂಟಾಲ್ ಗೆ 150 ರೂ., ಬಾರ್ಲಿ ಕ್ವಿಂಟಾಲ್ ಗೆ 115 ರೂ., ಸೂರ್ಯಕಾಂತಿ ಕ್ವಿಂಟಾಲ್ ಗೆ 150 ರೂ, ಕಡಲೆ 105 ರೂ.ಗೆ ಹೆಚ್ಚಿಸಲಾಗಿದೆ.

ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆಯಲ್ಲಿ ರಬಿ ಬೆಳೆಗಳ ಎಂಎಸ್ಪಿಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read