ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ಲಡ್ಡು ಪ್ರಸಾದ ಪಡೆಯಲು ಕಿಯೋಸ್ಕ್ ಅಳವಡಿಕೆ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯವಾಗಿರುವ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಲಾಡು ಪ್ರಸಾದ ಪಡೆಯಲು ಕಿಯೋಸ್ಕ್ ಗಳನ್ನು ಅಳವಡಿಸಲಾಗಿದೆ.

ದೇವಸ್ಥಾನಕ್ಕೆ ಬರುವ ಭಕ್ತರು ಲಾಡು ಪ್ರಸಾದ ಪಡೆದುಕೊಳ್ಳಲು ದೇವಸ್ಥಾನದ ವಿವಿಧ ಲಾಡು ಕೌಂಟರ್ ಗಳ ಬಳಿ ಕಿಯೋಸ್ಕ್ ಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿ ಲಾಡು ಪಡೆಯಲು ಭಕ್ತರು ಸರದಿ ಸಾಲಿನಲ್ಲಿ ನಿಂತು ಕೌಂಟರ್ ಗಳ ಬಳಿ ಹಣ ಪಾವತಿಸಬೇಕಿತ್ತು.

ಆದರೆ, ಇನ್ನು ಮುಂದೆ ಹೆಚ್ಚುವರಿ ಲಾಡುಗಳು ಬೇಕಾಗಿದ್ದರೆ ಯುಪಿಐ ಮೂಲಕ ಹಣ ಪಾವತಿಸಬೇಕು. ನಂತರ ಸಿಗುವ ಪಾವತಿ ಚೀಟಿಗಳನ್ನು ಲಡ್ಡು ಕೌಂಟರ್‌ ಗೆ ಸಲ್ಲಿಸಿ ಹೆಚ್ಚುವರಿ ಲಡ್ಡುಗಳನ್ನು ಪಡೆದುಕೊಳ್ಳಬಹುದು. ಇದರಿಂದ ಕ್ಯೂನಲ್ಲಿ ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ ಎಂದು ತಿರುಪತಿ ತಿರುಮಲ ದೇವಸ್ಥಾನ ಮಂಡಳಿ(ಟಿಟಿಡಿ) ತಿಳಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read