ಕಲ್ಯಾಣ ಮಂಟಪದಲ್ಲೇ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಬೆಂಗಳೂರು: ಕಲ್ಯಾಣ ಮಂಟಪದಲ್ಲಿ ವಧುವಿನ ಕೊಠಡಿಯಲ್ಲಿದ್ದ 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದೆ.

ಗವಿಪುರ ಬಡಾವಣೆ ನಿವಾಸಿ ಎಲ್. ಶಿವಶಂಕರ್ ಅವರು ನೀಡಿದ ದೂರಿನ ಅನ್ವಯ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಬಂದು ಹೋಗುತ್ತಿರುವ ದೃಶ್ಯ ಕಲ್ಯಾಣ ಮಂದಿರದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನು ಆಧರಿಸಿ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಶಿವಶಂಕರ್ ತಮ್ಮ ಪುತ್ರಿಯ ಮದುವೆಗೆ ರಾಜಾಜಿನಗರದ ಸಪ್ತಪದಿ ಕಲ್ಯಾಣ ಮಂದಿರ ಬುಕ್ ಮಾಡಿದ್ದರು. ಮೇ 29ರಂದು ಸಂಜೆ ಆರತಕ್ಷತೆ ನಡೆದಿತ್ತು. ಗಣ್ಯರು ಸಂಬಂಧಿಕರು ಬಂದು ಉಡುಗೊರೆಗಳನ್ನು ನೀಡಿದ್ದರು. ವಧುವಿಗೆ ಸೇರಿದ ಚಿನ್ನಾಭರಣ, ನಗದು ಮತ್ತು ಉಡುಗೊರೆಗಳನ್ನು ಕೊಠಡಿಯಲ್ಲಿ ಸೂಟ್ಕೇಸ್ ನಲ್ಲಿ ಇಡಲಾಗಿದ್ದು, ಅದನ್ನು ಕಳವು ಮಾಡಲಾಗಿದೆ.

ಮೇ 30 ರಂದು ಮುಹೂರ್ತ ಇದ್ದು ಮುಂಜಾನೆ ವಧು ಸಿದ್ದಗೊಂಡು ಕೆಲವು ಆಭರಣಗಳನ್ನು ಕೊಠಡಿಯಲ್ಲಿಟ್ಟು ಮುಹೂರ್ತಕ್ಕೆ ಹೋಗಿದ್ದಾರೆ. ಆಗ ನಕಲಿ ಕಿ ಬಳಸಿ ಬಾಗಿಲು ತೆಗೆದು ಒಳನುಗ್ಗಿದ ಕಳ್ಳ ನಗದು, ಕಿವಿಯೋಲೆ, ಚೈನ್ ಆಭರಗಳಿದ್ದ ಸೂಟ್ಕೇಸ್ ಅನ್ನು ಕಳವುಮಾಡಿದ್ದಾನೆ. ಮುಹೂರ್ತ ಮುಗಿಸಿ ಊಟವಾದ ಮೇಲೆ ರೂಮ್ ಗೆ ಬಂದಾಗ ಆವರಣಗಳು ಇದ್ದ ಸೂಟ್ಕೇಸ್ ಇರಲಿಲ್ಲ. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅಪರಿಚಿತ ಬಂದು ಹೋದ ದೃಶ್ಯ ಕಂಡು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read