ಪರಶುರಾಮ ವಿಗ್ರಹ ನಿರ್ಮಾಣದಲ್ಲಿ ವಂಚನೆ: ಕೇರಳದಲ್ಲಿ ಶಿಲ್ಪಿ ಕೃಷ್ಣನಾಯಕ್ ಅರೆಸ್ಟ್

ಕಾರ್ಕಳ: ಕಾರ್ಕಳದ ಬೈಲೂರಿನ ಉಮಿಕಲ್ಲ್ ಬೆಟ್ಟದ ಪರಶುರಾಮ ಥೀಂ ಪಾರ್ಕ್ ನಲ್ಲಿ ಪರಶುರಾಮ ವಿಗ್ರಹ ನಿರ್ಮಾಣದಲ್ಲಿ ವಂಚಿಸಿದ್ದ ಪ್ರಕರಣದ ಆರೋಪಿ ಶಿಲ್ಪಿ ಕೃಷ್ಣನಾಯಕ್ ಅವರನ್ನು ಕೇರಳದ ಕ್ಯಾಲಿಕಟ್ ನಲ್ಲಿ ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಕೃಷ್ಣ ಆರ್ಟ್ ವರ್ಲ್ಡ್ ಎಂಬ ಸಂಸ್ಥೆಯ ಮೂಲಕ ಪರಶುರಾಮನ ಕಂಚಿನ ವಿಗ್ರಹ ನಿರ್ಮಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ 1.25 ಕೋಟಿ ರೂಪಾಯಿಯನ್ನು ಕೃಷ್ಣನಾಯಕ್ ಪಡೆದುಕೊಂಡಿದ್ದರು. ನಂತರ ಕಂಚಿನ ಬದಲು ನಕಲಿ ವಿಗ್ರಹ ಸಿದ್ಧಪಡಿಸಿ ವಂಚನೆ ಮಾಡಿದ್ದಾರೆಂದು ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣ ರದ್ದು ಮಾಡುವಂತೆ ಕೋರಿ ಕೃಷ್ಣ ನಾಯಕ್ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ಕಳೆದ ಅಕ್ಟೋಬರ್ 21 ರಂದು ವಜಗೊಂಡಿತ್ತು. ನಂತರ ನಿರೀಕ್ಷಣಾ ಜಾಮೀನು ಕೋರಿ ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕೃಷ್ಣನಾಯಕ್ ಸಲ್ಲಿಸಿದ ಅರ್ಜಿಯೂ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read