ಬಾಯಿ ಹುಣ್ಣು ಶಮನವಾಗಬೇಕೆಂದ್ರೆ ಇದನ್ನು ಪಾಲಿಸಿ

ಬಾಯಿಯಲ್ಲಿ ಹುಣ್ಣಾಗುವುದರಿಂದ ಊಟ ಮಾಡಲು ತೊಂದರೆಯಾಗುತ್ತದೆ, ತುಟಿ ಬಿಚ್ಚಲು ಕಷ್ಟವೆನಿಸುತ್ತದೆ. ಈ ನೋವಿನಿಂದ ತಕ್ಷಣ ಉಪಶಮನ ಹೊಂದಲು ಅನೇಕ ಮಾರ್ಗಗಳಿವೆ.

* ತಣ್ಣನೆಯ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಬಳಿಕ ಲವಂಗವನ್ನು ದವಡೆಯೊಳಗೆ ಇಟ್ಟುಕೊಂಡು ಅದರ ರಸ ಹುಣ್ಣಿನ ಮೇಲೆ ಬರುವಂತೆ ಮಾಡಬೇಕು. ಆ ರೀತಿ ಮಾಡಿದಾಗ ನೋವು ಕಡಿಮೆಯಾಗುವುದಲ್ಲದೆ, ಹುಣ್ಣು ಹರಡುವುದು ನಿಯಂತ್ರಣಕ್ಕೆ ಬರುತ್ತದೆ.

* ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

* ಐದಾರು ತುಳಸಿ ಎಲೆಗಳನ್ನು ಅಗೆದು ನುಂಗಿ. ಪ್ರತಿದಿನ ನಾಲ್ಕೈದು ಬಾರಿ ಈ ರೀತಿ ಮಾಡಿದರೆ ಎರಡು ದಿನಗಳಲ್ಲಿ ಬಾಯಿಹುಣ್ಣು ದೂರವಾಗುತ್ತದೆ.

* ಬಾಯಿಹುಣ್ಣು, ಊತ ಕಡಿಮೆ ಮಾಡುವ ಪ್ರಕ್ರಿಯೆಯಲ್ಲಿ ಜೇನು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಒಂದು ಸ್ಪೂನ್ ಜೇನನ್ನು ಅಂಗೈಯಲ್ಲಿ

ತೆಗೆದುಕೊಂಡು ಬೆರಳನ್ನು ಅದರಲ್ಲಿ ಅದ್ದಿ ಅದರಿಂದ ಹುಣ್ಣಿನ ಮೇಲೆ ಹಚ್ಚಬೇಕು. ಊತ ಇದ್ದರೆ ಬಾಯಿಗೆ ಹಚ್ಚಬೇಕು.

* ಎಳನೀರನ್ನು ಕುಡಿಯಬೇಕು. ಅದೇ ರೀತಿ ಕೊಬ್ಬರಿ ಇಲ್ಲವೇ ಒಣಕೊಬ್ಬರಿಯನ್ನು ತಿಂದರೂ ಸಹ ಪರಿಹಾರ ಸಿಗುತ್ತದೆ. ಇದ್ಯಾವುದೂ ಸಾಧ್ಯವಾಗದೇ ಹೋದಲ್ಲಿ ಕೊಬ್ಬರಿ ಎಣ್ಣೆಯನ್ನು ಹುಣ್ಣ ಮೇಲೆ ಹಚ್ಚಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read