BREAKING : ಮಾಜಿ ಸಚಿವ ‘ಅನಿಲ್ ದೇಶ್ಮುಖ್’ ಕಾರಿನ ಮೇಲೆ ಕಲ್ಲು ತೂರಾಟ ; ತಲೆಗೆ ಗಂಭೀರ ಗಾಯ.!

ನಾಗ್ಪುರ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಹಿರಿಯ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಕಾರಿನ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು ಸೋಮವಾರ ಕಲ್ಲು ತೂರಾಟ ನಡೆಸಿದ್ದು, ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ತಮ್ಮ ಪುತ್ರ ಸಲೀಲ್ ದೇಶ್ಮುಖ್ ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದ ದೇಶ್ಮುಖ್ ಅವರು ನರ್ಖೇಡ್ನಲ್ಲಿ ಸಾರ್ವಜನಿಕ ಸಭೆಯಿಂದ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

ಕಲ್ಲು ತೂರಿದಾಗ ಕಾರಿನ ಕಿಟಕಿಯನ್ನು ಛಿದ್ರ ಛಿದ್ರವಾಗಿದೆ. ದೇಶ್ಮುಖ್ ಅವರ ತಲೆಗೆ ಕಲ್ಲು ತಗುಲಿ ಗಂಭೀರ ಗಾಯಗಳಾಗಿದೆ. ದೇಶ್ಮುಖ್ ಅವರನ್ನು ತಕ್ಷಣ ಕಟೋಲ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ವೈದ್ಯಕೀಯ ಚಿಕಿತ್ಸೆ ಪಡೆದರು. ದಾಳಿಯ ಹಿಂದಿನ ಉದ್ದೇಶ ಮತ್ತು ದುಷ್ಕರ್ಮಿಗಳ ಗುರುತುಗಳು ಇನ್ನೂ ಸ್ಪಷ್ಟವಾಗಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read