ಕೊಚ್ಚಿ: ಮುತ್ತೂಟ್ ಫೈನಾನ್ಸ್ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಅಲೆಕ್ಸಾಂಡರ್ ಗೆ ಇಡಿ ಶಾಕ್ ನೀಡಿದೆ. ಹೂಡಿಕೆದಾರರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಜ್ ಅಲೆಕ್ಸಾಂಡರ್ ವಿಚಾರಣೆ ನಡೆಸಲಾಗಿದೆ.
ಕೇರಳದ ಕೊಚ್ಚಿಯ ಇಡಿ ಕಚೇರಿಯಲ್ಲಿ ಜಾರ್ಜ್ ಅಲೆಕ್ಸಾಂಡರ್ ವಿಚಾರಣೆ ನಡೆದಿದೆ. ಜಾರ್ಜ್ ಅಲೆಕ್ಸಾಂಡರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ಕೇಸು ದಾಖಲಿಸಿತ್ತು. ಹೂಡಿಕೆದಾರರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.
ಕೇರಳ ಪೊಲೀಸರು ದಾಖಲಿಸಿದ ಹಲವಾರು ಎಫ್ಐಆರ್ಗಳನ್ನು ಗಮನದಲ್ಲಿಟ್ಟುಕೊಂಡು, ಇಡಿಯ ಕೊಚ್ಚಿ ವಲಯ ಘಟಕವು ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಪೊಲೀಸ್ ದೂರುಗಳಲ್ಲಿ ಆರೋಪಿ, ಮುಖ್ಯವಾಗಿ ಮುತ್ತೂಟ್ ಫೈನಾನ್ಸ್ ಶಾಖೆಯ ವ್ಯವಸ್ಥಾಪಕರು, ಕೆಲವು ಸ್ಥಿರ ಠೇವಣಿಗಳು ಮತ್ತು ಪರಿವರ್ತಿಸಲಾಗದ ಡಿಬೆಂಚರ್ಗಳ(NCD) ಮೇಲೆ 8 ರಿಂದ 12% ರಷ್ಟು ಆದಾಯದ ಭರವಸೆಯೊಂದಿಗೆ ಹೂಡಿಕೆದಾರರನ್ನು ಆಕರ್ಷಿಸಿದರು, ಆದರೆ ಹಣವನ್ನು ಶ್ರೀ ಇಕ್ವಿಪ್ಮೆಂಟ್ ಫೈನಾನ್ಸ್ ಲಿಮಿಟೆಡ್ ಎಂಬ ಕಂಪನಿಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.