BIG NEWS: ಉದ್ಯೋಗಕ್ಕೆಂದು ಮಧ್ಯ ಆಫ್ರಿಕಾಗೆ ತೆರಳಿದ್ದ ರಾಜ್ಯದ 25 ನಾಟಿ ವೈದ್ಯರು ಸಂಕಷ್ಟದಲ್ಲಿ

ದಾವಣಗೆರೆ: ಉದ್ಯೋಗ ಆರಸಿ ಮಧ್ಯ ಆಫ್ರಿಕಾಗೆ ತೆರಳಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಕ್ಕಿ-ಪಿಕ್ಕಿ ಜನಂಗದ 25 ನಾಟಿ ವೈದ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಮಧ್ಯ ಆಫ್ರಿಕಾದ ಗಬಾನ್ ದೇಶಕ್ಕೆ ತೆರಳಿದ್ದ 25 ನಾಟಿ ವೈದ್ಯರು ಬಂಧನಕ್ಕೀದಾಗಿದ್ದಾರೆ ಎಂದು ತಿಳಿದುಬಂದಿದೆ. ಚನ್ನಗಿರಿ ತಾಲೂಕಿನ ಗೋಪನಾಳ್- ಅಸ್ತಾಪನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ 25 ನಟಿ ವೈದ್ಯರು ಗಬಾನ್ ಗೆ ತೆರಳಿದ್ದರು. ಅಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಹೊಸ ಸರ್ಕಾರ ಅಧಿಕರಕ್ಕೆ ಬಂದಿದ್ದು, ನೂತನ ಸರ್ಕಾರ ವಿದೇಶಿಯರು ದೇಶ ಬಿಡುವಂತೆ ತಾಕೀತು ಮಾಡಿದೆ.

ಈ ಹಿನ್ನೆಲೆಯಲ್ಲಿ ಗಬಾನ್ ರಾಜಧನೈ ಲಿಬ್ರೆವಿಲ್ ನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಲಿಬ್ರೆವಿಲ್ ನಲ್ಲಿ ವಾಸವಾಗಿದ್ದ ರಾಜ್ಯ 25 ನಾಟಿ ವೈದ್ಯರು ಸೇರಿ ಹಲವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಪಾಸ್ ಪೋರ್ಟ್ ಗಳನ್ನು ವಶಕ್ಕೆ ಪಡೆದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಲಿಬ್ರೆವಿಲ್ ನಲ್ಲಿನ ವೈದ್ಯರು ತಮ್ಮ ಕುಟುಂಬಕ್ಕೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರ ರಾಜ್ಯದ ವೈದ್ಯರನ್ನು ಕರೆತರಲು ಸಿಎಂ ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವರು ನೆರವಾಗಿವಂತೆ ಕುಟುಂಬದವರು ಮನವಿ ಮಾಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read