ಬೆಂಗಳೂರು: ಸದನದಲ್ಲಿ ಆರ್.ಎಸ್.ಎಸ್ ಗೀತೆ ಹಾಡಿದ್ದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸುನಿಲ್ ಕುಮಾರ್, ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಿದ್ದು ಬೇಸರವಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್ ಕುಮಾರ್, ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಿದ್ದು ಬೇಸತ ತಂದಿದೆ. ನೀವು ಗಾಂಧಿ ಕುಟುಂಬದ ಭಕ್ತರು ಅಲ್ಲ, ದೇಶದ ಭಕ್ತರಾಗಿ. ಗಾಂಧಿ ಕುಟುಂಬದ ನಿಷ್ಠರಾಗಲು ದೇಶದ ನಿಷ್ಠೆ ಕಳೆದುಕೊಳ್ಳಬೇಡಿ. ನಾನು ಆರ್.ಎಸ್.ಎಸ್ ವಿಠಲ ಶಾಖೆಗೆ ಹೋಗುತ್ತಿದ್ದೆ ಅಂತಾ ಹೇಳಿದ್ದರು ಎಂದರು.
ಸದನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಆರ್.ಎಸ್.ಎಸ್ ಗೀತೆಯ ಎರಡು ಸಾಲು ಹೇಳಿದ್ದಕ್ಕೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇನ್ನು ಪೂರ್ತಿ ಗೀತೆ ಹೇಳಿದ್ದರೆ ಇನ್ನೇನು ಆಗುತ್ತಿತ್ತೋ? ಡಿ.ಕೆ.ಶಿವಕುಮಾರ್ ಅಧಿಕಾರದ ಆಸೆಯಿಂದ ಕ್ಷಮೆ ಕೇಳಿದ್ದಾರೆ ಎಂದು ಹೇಳಿದರು.