ಬೆಳ್ತಂಗಡಿ : ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಉದಯ್ ಕುಮಾರ್ ಜೈನ್ ಸೇರಿ ಹಲವರಿಗೆ SIT ಬುಲಾವ್ ನೀಡಿದೆ. ಸೌಜನ್ಯ ಮನೆಯವರು ಉದಯ್ ಕುಮಾರ್ ಸೇರಿ ಹಲವರ ಮೇಲೆ ಆರೋಪ ಮಾಡಿದ್ದರು. ಇದೀಗ ಉದಯ್ ಕುಮಾರ್ ಜೈನ್ ಎಸ್ ಐ ಟಿ (SIT) ವಿಚಾರಣೆಗೆ ಹಾಜರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಎಸ್ ಐ ಟಿ ಕಚೇರಿಗೆ ಆರೋಪ ಹೊತ್ತ ಉದಯ್ ಕುಮಾರ್ ಜೈನ್ ಧೀರಜ್ ಹಾಗೂ ಮಲ್ಲಿಕ್ ಜೈನ್ ಗೆ ಅಧಿಕಾರಿಗಳು ಬುಲಾವ್ ನೀಡಿದ್ದರು. ಇದೀಗ ಉದಯ್ ಕುಮಾರ್ ಜೈನ್ ಎಸ್ ಐ ಟಿ ಕಚೇರಿಗೆ ಆಗಮಿಸಿದ್ದಾರೆ. ಈ ಕುರಿತು ಸುದ್ದಿಗಾರರ ಜೊತೆ ಉದಯ್ ಕುಮಾರ್ ಜೈನ್ ‘ ನಾನು ಯಾವುದೇ ತನಿಖೆಗೆ ಸಿದ್ದ ಎಂದು ಹೇಳಿದ್ದಾರೆ.
ಧರ್ಮಸ್ಥಳದ ಬರುಡೆ ಕೇಸ್ ನಡುವೆ ಎಸ್ ಐ ಟಿ (SIT) ಸದ್ದಿಲ್ಲದೇ ‘ಸೌಜನ್ಯ ಕೇಸ್’ ತನಿಖೆ ಆರಂಭಿಸಿದ್ಯಾ ಎಂಬ ಪ್ರಶ್ನೆ ಮೂಡಿದೆ.ಎಸ್ ಐ ಟಿ ಉದಯ್ ಕುಮಾರ್ ಜೈನ್ ಸೇರಿ ಹಲವರಿಗೆ ಬುಲಾವ್ ನೀಡಿದೆ. ಸೌಜನ್ಯ ಮನೆಯವರು ಉದಯ್ ಕುಮಾರ್ ಸೇರಿ ಹಲವರ ಮೇಲೆ ಆರೋಪ ಮಾಡಿದ್ದರು. ಈ ಹಿನ್ನೆಲೆ ಎಸ್ ಐ ಟಿ ಸದ್ದಿಲ್ಲದೇ ತನಿಖೆ ಆರಂಭಿಸಿದ್ಯಾ ಎಂಬ ಪ್ರಶ್ನೆ ಮೂಡಿದೆ.