ಒಟ್ಟಿಗೇ ಜೀವನ ನಡೆಸಿ ಸಾವಿನಲ್ಲೂ ಜೊತೆಗೇ ಹೆಜ್ಜೆ ಹಾಕಿದ ದಂಪತಿ: ಬಾವಿಗೆ ಹಾರಿ ಆತ್ಮಹತ್ಯೆ

ಬಾಗಲಕೋಟೆ: ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿದ್ದ ದಂಪತಿ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಕೆಂಗೇರಿ ಮಡ್ಡಿ ಲಕ್ಷ್ಮಿ ದೇವಿ ಗುಡಿ ಬಳಿ ನಡೆದಿದೆ.

ಪಿರಾಜಿ ಹುಸೇನ್ ಜೀ ಕಲಾಲ(72), ಸರಸ್ವತಿ ಪಿರಾಜಿ ಕಲಾಲ(62) ಮೃತಪಟ್ಟ ದಂಪತಿ ಎಂದು ಹೇಳಲಾಗಿದೆ. ಅವರಿಗೆ ಮೂವರು ಪುತ್ರರು, ಪುತ್ರಿ ಇದ್ದಾರೆ. ಕೋಳಿ ಸಾಕಣೆ ಉದ್ಯಮ ಮಾಡಿಕೊಂಡಿದ್ದ ಪಿರಾಜಿ ಹುಸೇನ್ ವಿಶ್ರಾಂತಿ ಜೀವನ ನಡೆಸುತ್ತಿದ್ದರು. ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿದ್ದ ದಂಪತಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಯಾಗಿ ಜೀವನ ಸಾಗಿಸಿದ ದಂಪತಿ ಸಾವಿನಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read