ಹಾಲು ಒಕ್ಕೂಟಗಳ ಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್

ಬೆಂಗಳೂರು: ಕರ್ನಾಟಕ ಹಾಲು ಮಹಾ ಮಂಡಳ ಮತ್ತು 13 ಒಕ್ಕೂಟಗಳ ಗುತ್ತಿಗೆ ನೌಕರರಿಗೆ ಕೈಗಾರಿಕಾ ನ್ಯಾಯ ಮಂಡಳಿಯಿಂದ ಸಿಹಿ ಸುದ್ದಿ ಸಿಕ್ಕಿದೆ. ಶಾಶ್ವತ ಸಿಬ್ಬಂದಿಗೆ ನೀಡುವ ವೇತನ ಮತ್ತು ಸೌಲಭ್ಯಗಳನ್ನು ಗುತ್ತಿಗೆ ನೌಕರರಿಗೂ ನೀಡುವಂತೆ ನ್ಯಾಯಮಂಡಳಿ ಆದೇಶಿಸಿದೆ.

ಈ ಮೂಲಕ 18 ವರ್ಷಗಳಿಂದ ಕಾರ್ಮಿಕರು ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಕೆಎಂಎಫ್ ಮತ್ತು ಕೆಎಂಎಫ್ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸುವ ಪಶು ಆಹಾರ ಘಟಕ, ಹಾಲು ಉತ್ಪಾದನಾ ಘಟಕ ಹಾಗೂ ಹಾಲು ಒಕ್ಕೂಟಗಳಲ್ಲಿನ ಗುತ್ತಿಗೆ ನೌಕರರ ಪೈಕಿ ನ್ಯಾಯಾಧೀಕರಣ ಮುಂದೆ ಹೋರಾಟ ಮಾಡಿದವರಿಗೆ ಈ ಸೌಲಭ್ಯ ಸಿಗಲಿದೆ. ಹಿಂದ್ ಮಜ್ದೂರ್, ಕಿಸಾನ್ ಪಂಚಾಯತ್, ಕೆಎಂಎಫ್ ನೌಕರರ ಸಂಘ ಸತತ ಹೋರಾಟ ನಡೆಸಿದ್ದವು.

ಸದ್ಯ ನ್ಯಾಯಮಂಡಳಿ ಮುಂದೆ ಹೋರಾಟ ಮಾಡಿದ ಸುಮಾರು 2000 ಜನರ ಪರವಾಗಿ ಈ ತೀರ್ಪು ಬಂದಿದೆ. ಉಳಿದ ನೌಕರರು ಈ ತೀರ್ಪನ್ನೇ ಆಧಾರವಾಗಿಟ್ಟುಕೊಂಡು ಕಾನೂನು ಹೋರಾಟ ಮಾಡಿದರೆ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.

ಕೈಗಾರಿಕಾ ನ್ಯಾಯ ಮಂಡಳಿ ತೀರ್ಪಿನ ವಿರುದ್ಧ ಕೆಎಂಎಫ್ ಮತ್ತು ಹಾಲು ಒಕ್ಕೂಟಗಳು ಹೈಕೋರ್ಟ್ ಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read