BIG NEWS: ಕಾನ್ ಸ್ಟೇಬಲ್ ನಿಂದ ಹೋಮ್ ಗಾರ್ಡ್ ಗೆ ವಂಚನೆ; ದೂರು ದಾಖಲು

ಬೆಂಗಳೂರು: ಗೃಹ ರಕ್ಷಕ ಸಿಬ್ಬಂದಿಯಿಂದ ಹಣ ಪಡೆದು ಕಾನ್ಸ್ ಟೇಬಲ್ ಓರ್ವರು ವಂಚಿಸಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲ ಸಂಚಾರಿ ಠಾಣೆಯ ಕಾನ್ಸ್ ಟೇಬಲ್ ಕಾರ್ತಿಕ್ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೋಮ್ ಗಾರ್ಡ್ ರಾಜು ಎಂಬುವವರಿಗೆ ಬಡ್ದಿ ಕೊಡಿಸುವುದಾಗಿ ಹೇಳಿ 35 ಸಾವಿರ ರೂಪಾಯಿ ಪಡೆದುಕೊಂಡಿದ್ದ ಕಾರ್ತಿಕ್ ಬಡ್ಡಿಯನ್ನೂ ಕೊಡಿಸದೇ, ಹಣವನ್ನೂ ವಾಪಾಸ್ ಕೊಡದೇ ವಂಚಿಸಿದ್ದಾರೆ.

ಈಗ ಹಣ ವಾಪಾಸ್ ಕೇಳಿದರೆ ಸಬೂಬು ಹೇಳಿ ಎಸ್ಕೇಪ್ ಆಗುತ್ತಿರುವುದಾಗಿ ರಾಜು, ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾರ್ತಿಕ್ ವಿರುದ್ಧ ಈ ಹಿಂದೆಯೂ ಇದೇ ರೀತಿ ಹಲವರಿಂದ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read