‘ಸೆಲ್ಪಿ’ ಕ್ಲಿಕ್ಕಿಸಿ ಕನ್ನಡದ ಡಿಜಿಟಲ್ ಅಭಿಯಾನದಲ್ಲಿ ಭಾಗಿಯಾಗಿ : ಕನ್ನಡಿಗರಿಗೆ DCM ಡಿಕೆ ಶಿವಕುಮಾರ್ ಕರೆ.!

ಬೆಂಗಳೂರು : ಸೆಲ್ಪಿ ಕ್ಲಿಕ್ಕಿಸಿ ‘ಕನ್ನಡದ ಡಿಜಿಟಲ್ ಅಭಿಯಾನ’ದಲ್ಲಿ ಭಾಗಿಯಾಗಿ ಎಂದು ಕನ್ನಡಿಗರಿಗೆ ಡಿಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್   ” ನಮ್ಮ ಹೆಮ್ಮೆಯ ಕರುನಾಡು ಕಲೆ, ಸಾಹಿತ್ಯದ ತವರೂರು. ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡುತ್ತಿರುವ ಕರ್ನಾಟಕ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಕನ್ನಡ ರಾಜ್ಯೋತ್ಸವ ಕನ್ನಡಿಗರ ಹಬ್ಬ. ಈ ಬಾರಿ ವಿಭಿನ್ನವಾಗಿ, ವಿಶೇಷವಾಗಿ ಡಿಜಿಟಲ್ ರೂಪದಲ್ಲೂ ನಾವೆಲ್ಲರೂ ಕನ್ನಡ ರಾಜ್ಯೋತ್ಸವ ಆಚರಿಸೋಣ. ಕನ್ನಡದ ಕಂಪು ಡಿಜಿಟಲ್ ಜಗತ್ತಿಗೆ ಸಾರುವ ಇನ್ಸ್ಟಾಗ್ರಾಮ್ನ ‘ಕನ್ನಡ ಫಿಲ್ಟರ್’ ಬಳಸಿ ಸೆಲ್ಪಿ ತೆಗೆದುಕೊಳ್ಳುವ ಮೂಲಕ ನಾನು ಈ ಡಿಜಿಟಲ್ ಅಭಿಯಾನದಲ್ಲಿ ಭಾಗಿಯಾಗಿದ್ದೇನೆ. ನೀವೂ ಕೂಡ ಈ ಡಿಜಿಟಲ್ ಅಭಿಯಾನದಲ್ಲಿ ಭಾಗಿಯಾಗುವ ಮೂಲಕ “ನಾನೂ ಹೆಮ್ಮೆಯ ಕನ್ನಡಿಗ” ಎಂದು ಗರ್ವದಿಂದ ಹೇಳಿ. ‘ಕನ್ನಡದ ಕಂಪನ್ನು’ ಸಾರುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಸಂಭ್ರಮಿಸೋಣ” ಎಂದು ಕನ್ನಡಿಗರಿಗೆ ಡಿಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read