ಮರವೇರಿ ಸೊಪ್ಪು ಕಡಿಯುವಾಗ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

ಚಿಕ್ಕಬಳ್ಳಾಪುರ: ಮೇಕೆಗಳಿಗೆ ಮರವೇರಿ ಸೊಪ್ಪು ಕಡಿಯುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಅಚೇಪಲ್ಲಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ದಿಬ್ಬೂರುಹಳ್ಳಿ ಮೂಲದ ದೇವಪ್ಪ(12) ಮೃತಪಟ್ಟ ಬಾಲಕ. ಬರದಿಂದಾಗಿ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಇದರಿಂದಾಗಿ ಜಾನುವಾರುಗಳ ಮಾಲೀಕರು ಪರದಾಡುವಂತಾಗಿದೆ. ರಸ್ತೆ ಬದಿಗಳ ಮರಗಳಲ್ಲಿನ ಸೊಪ್ಪು ಕಡಿದು ಜಾನುವಾರುಗಳಿಗೆ ಹಾಕಲಾಗುತ್ತದೆ. ಇದೇ ರೀತಿ ಮೇಕೆಗಾಗಿ ದೇವಪ್ಪ ಅಚೇಪಲ್ಲಿ ಗ್ರಾಮದ ರಸ್ತೆ ಬಳಿಯ ಆಲದ ಮರವೇರಿ ಸೊಪ್ಪಿನ ರೆಂಬೆ ಕಡಿಯುವಾಗ ಮರದಡಿ ಹಾದುಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾನೆ. ಬಾಗೇಪಲ್ಲಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read