BIG NEWS: ಚಿರತೆ ದಾಳಿಗೆ 32 ಕುರಿಗಳು ಬಲಿ

ಬೆಂಗಳೂರು: ಒಂದೆಡೆ ರಾಜ್ಯ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಆತಂಕಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ತುಮಕೂರಿನಲ್ಲಿ ಚಿರತೆಗಳ ದಾಳಿಗೆ 32 ಕುರಿಗಳು ಬಲಿಯಾಗಿರುವ ಘಟನೆ ನಡೆದಿದೆ.

ತುಮಕೂರಿನ ದೊಡ್ಡಹೊಸಹಳ್ಳಿಯಲ್ಲಿ ಕುರಿದೊಡ್ಡಿಯ ಮೇಲೆ ಚಿರತೆಗಳು ದಾಳಿ ನಡೆಸಿವೆ. ಬರೊಬ್ಬರಿ 32 ಕುರಿಗಳು ಚಿರತೆ ದಾಳಿಗೆ ಸಾವನ್ನಪ್ಪಿವೆ. ಜನರು ಬರುತ್ತಿದ್ದಂತೆ 7 ಕುರಿಗಳನ್ನು ಚಿರತೆಗಳು ಹೊತ್ತೊಯ್ದಿವೆ.

ಕುರಿದೊಡ್ದಿಯ ಮಾಲೀಕರು, ಗ್ರಾಮಸ್ಥರು ಈ ಬಗ್ಗೆ ಮಾಹಿತಿ ನೀಡಿದ್ದು, 5 ಚಿರತೆಗಳು ಕುರಿ ದೊಡ್ಡಿಯ ಮೇಲೆ ದಾಳಿ ನಡೆಸಿದ್ದು, 32 ಕುರಿಗಳನ್ನು ಬಲಿಪಡೆದಿವೆ. ಶಬ್ಧ ಕೇಳುತ್ತಿದ್ದಂತೆ ಜನರು ಕುರಿದೊಡ್ಡಿ ಬಳಿ ಬರುತ್ತಿದ್ದಂತೆ ಚಿರತೆಗಳು 7 ಕುರಿಗಳ ಸಮೇತ ಸ್ಥಳದಿಂದ ಕಾಲ್ಕಿತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಗಳ ಸೆರೆ ಹಿಡಿಯಬೇಕು. ಗ್ರಾಮಸ್ಥರು, ಜನ-ಜಾನುವಾರುಗಳು ಜೀವ ಭಯದಲ್ಲಿ ಕಾಲಕಳೆಯುವಂತಾಗಿವೆ ಎಂದು ಅಳಲು ತೋಡಿಕೊಂಡಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read