ಚಾಮರಾಜನಗರ: ಪ್ರೀತಿಸಿದ ಯುವತಿ ದೂರಾಡಲು ಎಂಬ ಕಾರಣಕ್ಕೆ ಯುವತಿಯ ವಿರುದ್ಧ ಆರೋಪ ಮಾಡಿ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರದಲ್ಲಿ ನಡೆದಿದೆ.
24 ವರ್ಷದ ಸಂತೋಷ್ ಆತ್ಮಹತ್ಯೆಗೆ ಶರಣಾದ ಯುವಕ. ಪ್ರೀತಿಸಿದ ಯುವತಿ ಬೇರೊಬ್ಬನಿಗೆ ಮೆಸೇಜ್ ಮಾಡಿದ್ದಕ್ಕೆ ಸಂತೋಷ್ ಪ್ರಶ್ನೆ ಮಾಡಿದ್ದನಂತೆ ಇದದಿಂದ ಸಂತೋಷ್ ನನ್ನು ಅವಾಯ್ಡ್ ಮಾಡುತ್ತಿದ್ದ ಯುವತಿ ಆತನಿಂದ ದೀರಾಗಿದ್ದಳಂತೆ.
ಇದರಿಂದ ಮನನೊಂದ ಸಂತೀಷ್ ನನ್ನ ಸಾವಿಗೆ ಪ್ರೀತಿಸಿದ ಯುವತಿಯೇ ಕಾರಣ ಎಂದು ವಿಡಿಯೋ ಮಾಡಿಟ್ಟು, ವಾಟ್ಸಪ್ ಸ್ಟೇಟಸ್ ಹಾಕಿ ನೇಣಿಗೆ ಕೊರಳೊಡ್ಡಿದ್ದಾನೆ. ತೆರಕಣಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.