ನವದೆಹಲಿ: ಜಾತಿಗಣತಿ ಸರ್ವೆ ಹೊಸದಾಗಿ ಮಾಡಲು ಹೈಕಮಾಂಡ್ ನಾಯಕರು ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಾತಿಗಣತಿ ಸರ್ವೆ ಹೊಸದಾಗಿ ಮಾಡಲು ಸೂಚಿಸಿದ್ದಾರೆ. ಜಾತಿಗಣತಿ ಸರ್ವೆ ಹಳೆಯದಾದ ಕಾರಣ ಹೊಸದಾಗಿ ಮಾಡಲು ಸೂಚಿಸಿದ್ದಾರೆ ಎಂದರು.
ಜಾತಿಗಣತಿ ಬಗ್ಗೆ ಕೆಲವರು ಅಪಸ್ವರ ಎತ್ತಿದ್ದ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಜಾತಿಗಣತಿ ನಡೆದು 9-10 ವರ್ಷಗಳಾಗಿವೆ. ಹಾಗಾಗಿ ಜಾತಿ ಗಣತಿ ಮಾತ್ರ ಹೊಸದಾಗಿ ಮಾಡಲು ಒಪ್ಪಿದ್ದಾರೆ ಎಂದರು. ಮತ್ತೊಮ್ಮೆ ಸಮೀಕ್ಷೆಗೆ ಒಪ್ಪಿಗೆ ನೀಡಲಾಗಿದ್ದು, 90 ದಿನಗಳ ಒಳಗೆ ಜಾತಿಗಣತಿ ಸಮೀಕ್ಷೆ ಮುಗಿಯಲಿದೆ ಎಂದು ಹೇಳಿದರು.