BIG NEWS: ಕಾಂಗ್ರೆಸ್ ಡಿಎನ್ಎ ಶೆಟ್ಟರ್ ಗೆ ಮ್ಯಾಚ್ ಆಗಲ್ಲ, ಮ್ಯಾಚ್ ಆಗದ DNA ಜೊತೆ ಬಹಳ ಕಾಲ ಉಳಿದುಕೊಳ್ಳಲು ಸಾಧ್ಯವಿಲ್ಲ; ಟಾಂಗ್ ನೀಡಿದ ಸಿ.ಟಿ.ರವಿ

ಚಿಕ್ಕಮಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ, ಜಗದೀಶ್ ಶೆಟ್ಟರ್ ಯಾವ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು ಎಂಬುದು ಗೊತ್ತಿಲ್ಲ. ಮ್ಯಾಚ್ ಆಗದ ಡಿಎನ್ಎ ಜೊತೆ ಹೆಚ್ಚು ಕಾಲ ಇರಲು ಸಾಧ್ಯವಿಲ್ಲ ಎಂದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ಡಿಎನ್ಎ, ಜಗದೀಶ್ ಶೆಟ್ಟರ್ ಡಿಎನ್ಎ ಮ್ಯಾಚ್ ಆಗಲ್ಲ. ಜಗದೀಶ್ ಶೆಟ್ಟರ್ ತಂದೆ, ಚಿಕ್ಕಪ್ಪ ಜನಸಂಘದ ಕಾಲದಿಂದಲೂ ಪಕ್ಷದ ಜೊತೆಗಿದ್ದವರು. ಶೆಟ್ಟರ್ ಏಕೆ ಕಾಂಗ್ರೆಸ್ ಸೇರುವ ನಿರ್ಣಯ ಮಾಡಿದರೋ ಗೊತ್ತಿಲ್ಲ ಎಂದರು.

ಕಾಂಗ್ರೆಸ್ ಡಿಎನ್ಎ ಗೂ, ಜಗದೀಶ್ ಶೆಟ್ಟರ್ ಡಿಎನ್ಎ ಗೂ ಮ್ಯಾಚ್ ಆಗಲ್ಲ, ಮಿಸ್ ಮ್ಯಾಚ್ ಆಗುತ್ತೆ. ಅವರಿಗೆ ಮ್ಯಾಚ್ ಆಗುವ ಡಿಎನ್ಎ ರಾಷ್ಟ್ರವಾದ. ಕಾಂಗ್ರೆಸ್ ಡಿಎನ್ಎ ಅವರಿಗೆ ಮ್ಯಾಚ್ ಆಗಲ್ಲ. ಮ್ಯಾಚ್ ಆಗದ ಡಿಎನ್ಎ ಜೊತೆ ಬಹಳ ಕಾಲ ಉಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read