ʼಸುಖ-ಸಮೃದ್ಧಿʼಗಾಗಿ ಇವುಗಳನ್ನು ಇಂದೇ ಮನೆಗೆ ತನ್ನಿ

ಪ್ರತಿಯೊಬ್ಬರೂ ಯಶಸ್ಸಿನ ಹಿಂದೆ ಬೀಳ್ತಾರೆ. ಗುರಿ ಮುಟ್ಟಲು ಹಗಲು ರಾತ್ರಿ ದುಡಿಯುತ್ತಾರೆ. ಆದ್ರೆ ಎಲ್ಲರಿಗೂ ಯಶಸ್ಸು ಸಿಗಲು ಸಾಧ್ಯವಿಲ್ಲ. ಪರಿಶ್ರಮದ ಜೊತೆ ಅದೃಷ್ಟ ಜೊತೆಗಿದ್ರೆ ಮಾತ್ರ ಬಯಸಿದ್ದು ಸಿಗಲು ಸಾಧ್ಯ. ಅದೃಷ್ಟ ನಿಮ್ಮ ಜೊತೆಗಿಲ್ಲ ಎಂಬ ಭಾವನೆ ನಿಮಗೆ ಬಂದಿದ್ರೆ ಇಂದೇ ಈ ಕೆಲಸ ಮಾಡಿ.

ಲೋಹದ ಆಮೆ: ಲೋಹದ ಆಮೆಗೆ ಶಾಸ್ತ್ರದಲ್ಲಿ ಮಹತ್ವದ ಸ್ಥಾನವಿದೆ. ಮನೆಗೆ ಸಂಪತ್ತು, ಸಮೃದ್ಧಿ ತರುವ ಕೆಲಸವನ್ನು ಆಮೆ ಮಾಡುತ್ತದೆ. ಹಾಗಾಗಿ ಇಂದೇ ಲೋಹದ ಆಮೆಯನ್ನು ಮನೆಗೆ ತಂದಿಡಿ.

ಪಿರಾಮಿಡ್: ಮನೆಯ ವಾತಾವರಣವನ್ನು ಸಕಾರಾತ್ಮಕಗೊಳಿಸುವ ಕೆಲಸವನ್ನು ಪಿರಾಮಿಡ್ ಮಾಡುತ್ತದೆ. ಪಿರಾಮಿಡ್ ಮನೆ ಜೊತೆ ಮನಸ್ಸನ್ನು ಶುದ್ಧಗೊಳಿಸುತ್ತದೆ. ನೀವು ಬಯಸಿದ್ದನ್ನು ಪಡೆಯಲು ಇದು ನೆರವಾಗುತ್ತದೆ.

ಬಿಳಿ ಕಲ್ಲು: ಮನೆಯಲ್ಲಿ ಅಂಡಾಕಾರದ ಬಿಳಿ ಕಲ್ಲಿದ್ದರೆ ಮಂಗಳಕರ. ಇದನ್ನು ಲಕ್ಷ್ಮಿ ರೂಪವೆಂದು ನಂಬಲಾಗಿದೆ. ಬಿಳಿ ಕಲ್ಲು ಮನೆಯಲ್ಲಿದ್ದರೆ ಹಣದ ಅಭಾವ ಎಂದೂ ಆಗುವುದಿಲ್ಲ.

ಈ ಮೂರು ವಸ್ತುಗಳನ್ನು ಇಂದೇ ಮನೆಗೆ ತಂದಿಡಿ. ಕೆಲ ದಿನಗಳಲ್ಲಿಯೇ ಪರಿಣಾಮ ಗಮನಿಸಿ. ಇವು ನಿಮ್ಮ ದುರ್ಭಾಗ್ಯ ದೂರ ಮಾಡಿ ಅದೃಷ್ಟ ಒಲಿಯುವಂತೆ ಮಾಡುತ್ತವೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read