ಅಸ್ಸಾಂನಲ್ಲಿ ಭೀಕರ ಪ್ರವಾಹ; ಕೊಚ್ಚಿಹೋದ ಸೇತುವೆ, ಜನರ ಬದುಕು ದುಸ್ತರ

ಅಸ್ಸಾಂನ ಕೆಲವು ಭಾಗಗಳಲ್ಲಿ ನಿರಂತರ ಮಳೆ ಮುಂದುವರಿದ ಕಾರಣ ಶುಕ್ರವಾರ ತಮುಲ್ಪುರದಲ್ಲಿ ಸೇತುವೆಯೊಂದು ಕೊಚ್ಚಿಹೋಗಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಉದಲಗುರಿ ಜಿಲ್ಲೆಯಲ್ಲಿ ಪ್ರವಾಹದಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ರಾಜ್ಯದ 12 ಜಿಲ್ಲೆಗಳಲ್ಲಿ ಇದುವರೆಗೆ ಸುಮಾರು ಐದು ಲಕ್ಷ ಜನರ ಮೇಲೆ ಪ್ರವಾಹ ಪರಿಣಾಮ ಬೀರಿದೆ ಎಂದು ಅಧಿಕೃತ ಬುಲೆಟಿನ್ ತಿಳಿಸಿದೆ. ರಾಜ್ಯದ 10 ಜಿಲ್ಲೆಗಳಲ್ಲಿ ಸುಮಾರು 1.2 ಲಕ್ಷ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ದೈನಂದಿನ ಪ್ರವಾಹ ವರದಿಯ ಪ್ರಕಾರ 3,25,600 ಕ್ಕೂ ಹೆಚ್ಚು ಜನರಿರುವ ಬಾರ್‌ಪೇಟಾವು ಹೆಚ್ಚು ಹಾನಿಗೊಳಗಾಗಿದೆ. ನಂತರ 77,700 ಕ್ಕೂ ಹೆಚ್ಚು ಜನರಿರುವ ನಲ್ಬರಿಯಲ್ಲೂ ಪ್ರವಾಹದ ಭೀಕರ ಸ್ಥಿತಿಯಿದೆ. ಲಖಿಂಪುರದಲ್ಲಿ ಸುಮಾರು 25,700 ಜನರು ಭಾರೀ ಮಳೆಯಿಂದ ಸಂಕಷ್ಟದಲ್ಲಿದ್ದಾರೆ.

ಬಕ್ಸಾ, ಬರ್ಪೇಟಾ, ಚಿರಾಂಗ್, ದರ್ರಾಂಗ್, ಧುಬ್ರಿ, ದಿಬ್ರುಗಢ್, ಕಾಮ್ರೂಪ್, ಕೊಕ್ರಜಾರ್, ಲಖಿಂಪುರ, ನಲ್ಬರಿ, ಸೋನಿತ್‌ಪುರ್ ಮತ್ತು ಉದಲ್‌ಗುರಿ ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ 4,95,700 ಕ್ಕೂ ಹೆಚ್ಚು ಜನರು ಹಾನಿಗೊಳಗಾಗಿದ್ದಾರೆ ಎಂದು ವರದಿ ತಿಳಿಸಿದೆ.

ASDMA ಪ್ರಕಾರ ಪ್ರಸ್ತುತ, 1,366 ಹಳ್ಳಿಗಳು ನೀರಿನಲ್ಲಿ ಮುಳುಗಿವೆ ಮತ್ತು 14,091.90 ಹೆಕ್ಟೇರ್ ಬೆಳೆ ಪ್ರದೇಶಗಳು ಅಸ್ಸಾಂನಾದ್ಯಂತ ಹಾನಿಗೊಳಗಾಗಿವೆ.

ಇಲ್ಲಿಯವರೆಗೆ, ಅರೆಸೈನಿಕ ಪಡೆಗಳು, NDRF, SDRF, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು (F&ES), ನಾಗರಿಕ ಆಡಳಿತಗಳು, NGOಗಳು ಮತ್ತು ಸ್ಥಳೀಯರು ವಿವಿಧ ಸ್ಥಳಗಳಿಂದ 561 ಜನರನ್ನು ರಕ್ಷಿಸಿದ್ದಾರೆ.

ಆಡಳಿತವು ಏಳು ಜಿಲ್ಲೆಗಳಲ್ಲಿ 83 ಪರಿಹಾರ ಶಿಬಿರಗಳನ್ನು ನಡೆಸುತ್ತಿದೆ. ಅಲ್ಲಿ 14,035 ಜನರು ಆಶ್ರಯ ಪಡೆದಿದ್ದಾರೆ ಮತ್ತು ಎಂಟು ಜಿಲ್ಲೆಗಳಲ್ಲಿ 79 ಪರಿಹಾರ ವಿತರಣಾ ಕೇಂದ್ರಗಳನ್ನು ನಡೆಸುತ್ತಿದ್ದಾರೆ.

https://twitter.com/ANI/status/1672151138047758338?ref_src=twsrc%5Etfw%7Ctwcamp%5Etweetembed%7Ctwterm%5E1672151138047758338%7Ctwgr%5Ea7ad72fd451e0ed08b653e732dc2bb9f167be14b%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fabplive-epaper-dh7e8ed9a840a34a2e9316137468a5ca4c%2Fbridgeinassamstamulpurgetswashedawayduetoheavyrainandfloodsituationgrim-newsid-n512078742

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read