ಮೈಸೂರು: ಲಾರಿ ಚಲಿಸುತ್ತಿದ್ದಾಗಲೇ ಸೇತುವೆ ಕುಸಿದು ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಇಟ್ನಾ ಬಳಿ ನಡೆದಿದೆ.
ಕಬಿನಿ ಬಲದಂಡೆ ನಾಲೆ ಬಳಿ ಈ ಘಟನೆ ನಡೆದಿದೆ. ಪುರದಕಟ್ಟೆ ಮಾರ್ಗವಾಗಿ ನಂಜನಗೂಡಿಗೆ ಭತ್ತ ಹೊತ್ತೊಯ್ಯುತ್ತಿದ್ದ ಲಾರಿ ಸೇತುವೆ ಮೇಲೆ ತೆರಳುತ್ತಿದ್ದಾಗಲೇ ಏಕಾಏಕಿ ಸೇತುವೆ ಕುಸಿದುಬಿದ್ದಿದೆ. ಭತ್ತ ನೀರುಪಾಲಾಗಿದೆ. ಲಾರಿ ಚಾಲಕ ಹಾಗೂ ಲೇಬರ್ಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಬಿನಿ ಬಲದಂಡೆ ನಿರ್ಮಾಣವಾದಾಗ ಕಟ್ಟಿದ್ದ ಸೇತುವೆ ಇದಾಗಿದ್ದು, ನಿರಂತರ ಮಳೆಯಿಂದಾಗಿ ಶಿಥಿಲಗೊಂಡು ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳೀಯರ ನೆರವಿನಿಂದ ಸದ್ಯ ಲಾರಿ ಮೇಲಕೆತ್ತಲಾಗಿದೆ.