ಬೆಂಗಳೂರು: ಬೆಂಗಳೂರಿನಲ್ಲಿ ಜೆಪ್ಟೊ ಡೆಲಿವರಿ ಬಾಯ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಷ್ಣುವರ್ಧನನನ್ನು ಬಸವೇಶ್ವರನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಮೇ 21ರಂದು ಬಸವೇಶ್ವರನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಆರ್ಡರ್ ಡೆಲಿವರಿ ವೇಳೆ ಪಕ್ಕದ ಮನೆಯ ವಿಳಾಸ ಇತ್ತು. ಯಾಕೆ ತಪ್ಪಾಗಿ ವಿಳಾಸ ನೀಡಿದ್ದೀರಿ ಎಂದು ಮಹಿಳೆ ಎಂದು ಕೇಳಿದೆ. ಈ ವೇಳೆ ಶಶಾಂಕ್ ಎಂಬಾತ ಬಂದು ನನ್ನ ಜೊತೆ ಗಲಾಟೆ ಮಾಡಿದ್ದ. ಕೋಪದಿಂದ ಹಲ್ಲೆ ಮಾಡಿದೆ ಎಂದು ವಿಷ್ಣುವರ್ಧನ ಹೇಳಿದ್ದಾನೆ.
ಶಶಾಂಕ್ ಅವರ ಪತ್ನಿ ಜೆಪ್ಟೊ ಆ್ಯಪ್ ನಲ್ಲಿ ಆರ್ಡರ್ ಮಾಡಿದ್ದು, ಅಡ್ರೆಸ್ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಹಲ್ಲೆ ಹಂತಕ್ಕೆ ಹೋಗಿದ್ದು, ಮನೆ ಬಾಗಿಲಿಗೆ ಆರ್ಡರ್ ತಂದ ಡೆಲಿವರಿ ಬಾಯ್ ವಿಷ್ಣುವರ್ಧನ ಗ್ರಾಹಕ ಶಶಾಂಕ್ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಶಶಾಂಕ್ ಕಣ್ಣಿಗೆ ಗಂಭೀರ ಗಾಯವಾಗಿ ಕಣ್ಣು ಕೆಳಗಿನ ಮೂಳೆ ಮುರಿದಿದೆ. ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.